ಬೇಲೂರು: ಕಸಾಯಿಖಾನೆಗೆ ಸಾಗಿಸುತ್ತಿದ್ದ ಎಂಟು ಗೋವುಗಳನ್ನು ರಕ್ಷಣೆ ಮಾಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮುದಿಗರೆ ಗ್ರಾಮದ ಸಮೀರ್ ಹಾಗೂ ಹನಿಕೆ ಗ್ರಾಮದ ಯೋಗೇಶ್ ಬಂಧಿತರು. ಇವರು ಮಿನಿಗೂಡ್ಸ್ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ಚಿಕ್ಕಮಗಳೂರು ರಸ್ತೆಯ ಚನ್ನಾಪುರ ಚೆಕ್ ಪೋಸ್ಡ್ ಕಡೆಯಿಂದ ಮಿನಿ ಗೂಡ್ಸ್ ವಾಹನದಲ್ಲಿಒಟ್ಟು 3.5 ಲಕ್ಷ ಮೌಲ್ಯದ ಎಂಟು ಜಾನುವಾರುಗಳನ್ನು ತೆಗೆದುಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಮಾಹಿತಿ ಬಂದ ಹಿನ್ನಲೆಯಲ್ಲಿ ಬೇಲೂರು ವೃತ್ತ ನಿರೀಕ್ಷಕ ಯೋಗೇಶ್ ಮತ್ತು ಸಿಬ್ಬಂದಿಗಳು ಬೆಳಗಿನ 6 ಗಂಟೆ ಸಮಯದಲ್ಲಿ ವಾಹನ ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಕಸಾಯಿ ಖಾನೆಗೆ ಎಂಟು ದನಗಳನ್ನು ಸಾಗಿಸುತ್ತಿದ್ದದ್ದು ಕಂಡು ಬಂದಿದ್ದು ಆರೋಪಿಗಳನ್ನು ವಾಹನ ಸಹಿತ ವಶಕ್ಕೆ ಪಡೆದು ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ಆರೋಪಿಗಳಾದ ಸಮೀರ್ ಮತ್ತು ಯೋಗೇಶ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ರಮೇಶ್, ಸಿಬ್ಬಂದಿಗಳಾದ ಪುಟ್ಟಸ್ವಾಮಿ ,ಅಣ್ಣೇಗೌಡ, ತಾಂಡವೇಶ್ ಭಾಗವಹಿಸಿದ್ದರು.