News Karnataka Kannada
Monday, May 06 2024
ಹಾಸನ

ಅರೇಹಳ್ಳಿ: ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮ

Arogya Amrita Abhiyan Programme
Photo Credit : News Kannada

ಅರೇಹಳ್ಳಿ: ವಯಸ್ಸಿನ ಮಿತಿಯಿಲ್ಲದೇ ಮಧುಮೇಹ ಯಾರಿಗಾದರೂ ಬರುವ ಸಂಭವವಿದೆ ಎಂದು ಡಾ.ಪ್ರವೀಣ್ ಹೇಳಿದರು.

ಹೋಬಳಿಯ ನಾರ್ವೆ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಮಾನ್ಯವಾಗಿ ೫೦ ವರ್ಷ ಮೇಲ್ಪಟ್ಟವರಿಗೆ ಮಧುಮೇಹ ರೋಗ ಬರಬಹುದು ಎಂಬ ನಂಬಿಕೆಯಿದೆ. ಬದಲಾದ ಕಾಲಘಟ್ಟದಲ್ಲಿ, ಬದಲಾದ ಆಹಾರ ಪದ್ಧತಿಯಿಂದ ಮಕ್ಕಳಲ್ಲಿಯೂ ಈ ರೋಗ ಬರುವ ಸಾಧ್ಯತೆಯಿದೆ. ಹಾಗಾಗಿ ಪೋಷಕಾಂಶಯುಕ್ತ ನಿಯಮಿತವಾದ ಆಹಾರ ಸೇವನೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬೀದಿ ಬದಿಯ ತಿಂಡಿಗಳು, ಫಾಸ್ಟ್ ಫುಡ್ಗಳ ದಾಸರಾಗುತ್ತಿರುವ ಯುವ ಪಡೆ ವಿವಿಧ ರೀತಿಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಬೇಬಿ ಪ್ರಕಾಶ್, ಉಪಾಧ್ಯಕ್ಷ ಮಲ್ಲಿಕಾರ್ಜುನ ನಾರ್ವೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಯ್ಯ, ಆರೋಗ್ಯ ಕಿರಿಯ ಸಹಾಯಕಿ ತಾಸೀನಾ ರಝಾಕ್, ಕಾರ್ಯದರ್ಶಿ ಚಾಮರಾಜ್, ಸುನೀತಾ, ಇತರ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು