News Karnataka Kannada
Wednesday, May 01 2024
ಉಡುಪಿ

ಕಾರ್ಕಳ: ಒಂದೇ ದಿನ ನಾಲ್ಕು ನಾಗರಹಾವು ಸೆರೆಹಿಡಿದ ಉರಗಪ್ರೇಮಿ ಅನಿಲ್‌

He threw diesel on the cobra and went to the hospital with a snake-like burning sensation
Photo Credit : Pixabay

ಕಾರ್ಕಳ: ಬಿಸಿಲಿನ ತಾಪಮಾನ ಹೆಚ್ಚಳದಿಂದಾಗಿ ಹಾವುಗಳು ತಂಪು ಪ್ರದೇಶಗಳನ್ನು ಆಶ್ರಯಿಸಿ ಹಾಗೂ ಆಹಾರ‌ ಹುಡುಕಿ ಕೊಂಡು ಮನೆ ಹಾಗೂ ಕಟ್ಟಡಗಳಿಗೆ ನುಗ್ಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

ಅಂತಹ ಘಟನೆಯೂ ಕಾರ್ಕಳ ಅಸುಪಾಸುಗಳಲ್ಲಿ ನಡೆಯುತ್ತಿದೆ. ಶನಿವಾರ ಒಂದೇ ದಿನ ನಾಲ್ಕು ನಾಗರಹಾವುಗಳು ಮೂರು ಮನೆಯೊಳಗೆ ಸೇರಿಕೊಂಡಿದ್ದು ಉರಗ ಪ್ರೇಮಿ ಅನಿಲ್ ಪ್ರಭು ಅವುಗಳ ಸೆರೆ‌ಹಿಡಿದಿದ್ದಾರೆ.

ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಪಕ್ಕದ ಮನೆಯೊಳಗೆ ಎರಡು ನಾಗರಹಾವುಗಳು ಸೇರಿದವು. ಅದನ್ನು ಕಂಡ ಮನೆ ಮಾಲಕ, ಉರಗ ಪ್ರೇಮಿ ಅನಿಲ್ ಪ್ರಭು ಅವರನ್ನು ಸಂಪರ್ಕಿಸಿದರು. ಘಟನಾ ಸ್ಥಳಕ್ಕೆ ತೆರಳಿದ ಅನಿಲ್ ಪ್ರಭು ಕ್ಷಣ ಮಾತ್ರದಲ್ಲಿ ಹಾವುಗಳೆರಡುಗಳನ್ನು ಸೆರೆ ಹಿಡಿದಿದ್ದಾರೆ.

ಕಾರ್ಕಳ ನಗರದ ಸಾಲ್ಮರ್ ಮಿಲ್ ಬಳಿಯ ಮನೆಯೊಂದರಲ್ಲಿ ಹಾಗೂ ಶ್ರೀ ಭುವನೇಂದ್ರ ಕಾಲೇಜು ಬಳಿಯ ಮನೆಯೊಂದರಲ್ಲೂ ನಾಗರಹಾವುಗಳು ಮುದುರಿ ಕುಳಿತಿತ್ತು. ಅಲ್ಲಿಗೂ ತೆರಳಿದ ಉರಗ ಪ್ರೇಮಿ ಅನಿಲ್ ಪ್ರಭು ಅವುಗಳನ್ನು ಸೆರೆ ಹಿಡಿದಿದ್ದಾರೆ.

ನಾಲ್ಕು ನಾಗರಹಾವುಗಳನ್ನು ದುರ್ಗ ಅಭಯಾರಣ್ಯದಲ್ಲಿ ಬಂಧಮುಕ್ತಗೊಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು