News Karnataka Kannada
Monday, April 29 2024
ಮಂಗಳೂರು

ಅಝಾನ್ ವಿರುದ್ಧ ಈಶ್ವರಪ್ಪ ಹೇಳಿಕೆ, ಬಿಜೆಪಿ ಪಕ್ಷದ ಕೊಳಕು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ

Eshwarappa's statement against Azaan reflects the dirty mentality of ruling BJP party: SDPI
Photo Credit : News Kannada

ಮಂಗಳೂರು: ನಗರದ ಕಾವೂರಿನಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಶಾಸಕ ಹರಕಲು ಬಾಯಿಯ ಈಶ್ವರಪ್ಪ ಬಾಷಣ ಮಾಡುವ ಸಂದರ್ಭದಲ್ಲಿ ಪಕ್ಕದ‌ ಮಸೀದಿಯಿಂದ ಅಝಾನ್ ಆಗುವಾಗ ಉದ್ದೇಶಪೂರ್ವಕವಾಗಿ ಅಝಾನ್ ನನ್ನು ಮತ್ತು ಅಲ್ಲಾಹುವಿನ ಬಗ್ಗೆ ಅವಹೇಳನ ನಡೆಸಿ ಕೋಮುದ್ವೇಷ ಹರಡಿಸಿ ಗಲಭೆ ಮತ್ತು ಅಶಾಂತಿ ಹಬ್ಬಲು ಪ್ರಯತ್ನಿಸಿದ ಘಟನೆಯ ಬಗ್ಗೆ ಎಸ್‌ಡಿಪಿಐ ದ.ಕ ಜಿಲ್ಲಾ ಪ್ರಧಾ‌ನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು ಪ್ರಪಂಚಾದ್ಯಂತ ನಮಾಝ್ ಗೆ ಮುಂಚಿತವಾಗಿ ಅಝಾನ್ ಕೊಡುವುದು ಮುಸ್ಲಿಂ ಸಮುದಾಯದ ಆರಾಧನಾ ಪದ್ಧತಿಯ ಭಾಗವಾಗಿದೆ. ಅದನ್ನು ಅಝಾನ್ ನಡೆಯುತ್ತಿರುವ ಸಂದರ್ಭದಲ್ಲೇ ಅವಹೇಳನ ನಡೆಸಿರುವುದು ಲೋಕಾದ್ಯಂತ ಇರುವ ಮುಸ್ಲಿಮರ ನಂಬಿಕೆಗೆ ಘಾಸಿ ತರುವ ಷಡ್ಯಂತರವಾಗಿದೆ. ಹಾಗೂ ಕೋಮು ಗಲಭೆ ನಡೆಸುವ ಹುನ್ನಾರವಾಗಿದೆ . ದೇಶಾದ್ಯಂತ ವಂಶಹತ್ಯೆ ‌ ಹಾಗೂ ನರಮೇದಗಳ ನಿರ್ಮಾಪಕರಿಗೆ ಅಝಾನ್ ಶಬ್ದದ ಇಂಪಾದ ಧ್ವನಿ ಕರ್ಕಶವಾಗಿ ಕೇಳುತ್ತಿದೆ ಇದು ಅವರ ಕೊಳಕು ಮನಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಾಜ್ಯ ಕಂಡ ಅತ್ಯಂತ ದುರಂತ ಮತ್ತು ದುರ್ಬಲ ನಾಯಕ ಈಶ್ವರಪ್ಪ ತನ್ನ 40% ಕಮಿಷನ್ ದಂದೆಯಿಂದ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರನಾಗಿದ್ದ ಸಂತೋಷ ಪಾಟೀಲ ಆತ್ಮಹತ್ಯೆಗೈದ ಪರಿಣಾಮ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದಿತ್ತು. ಈ ನಾಯಕನ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲೆ ಅಸಮಾಧಾನವಿದೆ. ಇದರಿಂದ ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ಸಿಗುವುದು ಅನುಮಾನ ಎಂದರಿತಿರುವ ಈಶ್ವರಪ್ಪ ತನ್ನ ಹರಕಲು ನಾಲಗೆ ಹರಿಯಬಿಡುವ ಮೂಲಕ ಮುಸ್ಲಿಮ್ ಸಮುದಾಯದ ಆಚಾರ ವಿಚಾರಗಳ ಬಗ್ಗೆ ಮಾತನಾಡಿ ಅಂಧ ಭಕ್ತರ ಚಪ್ಪಾಳೆ ಗಿಟ್ಟಿಸಿ ಸಂಘಪರಿವಾರ ಮುಖಂಡರ ಮನವೊಲಿಸಿ ಮುಂದಿನ ಚುನಾವಣೆಗೆ ಟಿಕೆಟ್ ಪಡೆಯುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು