ಹನಗೋಡು: ಭಾರೀ ಮಳೆಯಿಂದಾಗಿ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿದ್ದರಿಂದ ಮೇಕೆ ಸಾವನ್ನಪ್ಪಿದ್ದಲ್ಲದೆ, ವ್ಯಕ್ತಿ ಯೊಬ್ಬರಿಗೆ ವಿದ್ಯುತ್ ಶಾಕ್ ಗೊಳಗಾದ ಘಟನೆ ಹನಗೊಡು ಸಮೀಪದ ಹರೀನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹರೀನಹಳ್ಳಿ ಗ್ರಾಮದ ಸ್ವಾಮಿ ಎಂಬುವರ ಮನೆ ಮುಂದೆ ಇರುವ ವಿದ್ಯುತ್ ತಂತಿ ತುಂಡಾಗಿ ಕಂಬದ ಮೇಲೆ ಬಿದ್ದಿದೆ. ಇದರಿಂದ ಕಂಬದಲ್ಲಿ ವಿದ್ಯುತ್ ಪ್ರವಹಿಸಿ ಪಕ್ಕದಲ್ಲೆ ಇದ್ದ ಮೇಕೆಗೆ ತಗುಲಿದ್ದು ಅದು ಒದ್ದಾಡುತ್ತಿದ್ದನ್ನು ಗಮನಿಸಿದ ಗ್ರಾಮದ ಸಂತೋಷ್ ಎಂಬಾತ ಅದನ್ನು ಎಳೆಯಲು ಹೋಗಿದ್ದು ಅವರು ವಿದ್ಯುತ್ ಶಾಕ್ ಆಗಿದೆ.
ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ವಿದ್ಯುತ್ ದುರಸ್ತಿ ಪಡಿಸಿದ್ದಾರೆ. ಮೇಕೆ ಕಳೆದುಕೊಂಡ ಮಾಲೀಕ ಸ್ವಾಮಿಯವರಿಗೆ ಇಲಾಖೆ ವತಿಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮದ ಯುವ ಮುಖಂಡ ಹರೀನಹಳ್ಳಿ ಆನಂದ್ ಆಗ್ರಹಿಸಿದ್ದಾರೆ.