ಮೈಸೂರು: ಸರ್ಕಾರ ಸಂಗೀತ ಕಲಾವಿದರನ್ನ ಗುರುತಿಸಿ ಮುಖ್ಯವಾಹಿನಿಗೆ ತರಲು ಡಿಜಿಟಲ್ ಮಾಧ್ಯಮವನ್ನು ವೇದಿಕೆಗಳನ್ನಾಗಿ ಬಳಸಿಕೊಳ್ಳಬೇಕು ಎಂದು ಕಲಾವಿದೆ ವಿದೂಷಿ ದೀಪಿಕಾ ಪಾಂಡುರಂಗಿ ಹೇಳಿದ್ದಾರೆ.
ಮೈಸೂರಿನಲ್ಲಿ ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ “ಸಂಗೀತದಿಂದ ಆರೋಗ್ಯ” ವಿಚಾರಮಂಥನ ಕಾರ್ಯಕ್ರಮ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದಿರುವ ಸಂಗೀತ ಕಲಾವಿದರಿಗೆ ಸಂಗೀತ ಕಲಾ ಸಾರಥಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಸಂಗೀತ ಬೆಳೆಯುವಲ್ಲಿ ಮೈಸೂರಿನ ಕಲಾವಿದರ ಪಾತ್ರ ಮಹತ್ವವಾದುದು, ಯೋಗ ದಿನಾಚರಣೆ ಮತ್ತು ಸಂಗೀತ ಎರಡು ಒಂದೇ ದಿನದಂದೇ ಆಚರಿಸುತ್ತೇವೆ, ಸರ್ಕಾರ ಸಂಗೀತ ಕಲಾವಿದರನ್ನ ಗುರುತಿಸಿ ಮುಖ್ಯವಾಹನಿಗೆ ತರಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಳೈ ಆಳ್ವಾರ್ ಸ್ವಾಮೀಜಿ , ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ , ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ವೈ ಡಿ ರಾಜಣ್ಣ , ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ , ಲೇಖಕಿ ಶ್ವೇತಾ ಮಡಪ್ಪಾಡಿ , ಪ್ರಸಾದ್ ಸ್ಕೂಲ್ ಆಫ್ ರಿದಮ್ ಸಂಸ್ಥೆಯ ಮುಖ್ಯಸ್ಥರಾದ ರಾಘವೇಂದ್ರ ಪ್ರಸಾದ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ , ಪ್ರಧಾನ ಕಾರ್ಯದರ್ಶಿ ಅಜಯ್ ಶಾಸ್ತ್ರಿ , ವಿನಯ್ ಕಣಗಾಲ್ , ಸುಚೀಂದ್ರ , ಚಕ್ರಪಾಣಿ , ನವೀನ್ ಕೆಂಪಿ,ನಾಗಶ್ರೀ ಸುಚೀಂದ್ರ ಇನ್ನಿತರರು ಇದ್ದರು.