News Karnataka Kannada
Thursday, May 02 2024
ಮೈಸೂರು

ನಂಜನಗೂಡು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ದರ್ಶನ್ ಧ್ರುವನಾರಾಯಣ್ ಮತಯಾಚನೆ

Darshan Dhruvanarayan campaigns in various localities of Nanjangud town
Photo Credit : News Kannada

ನಂಜನಗೂಡು: ಇಲ್ಲಿನ ಪಟ್ಟಣದ ವ್ಯಾಪ್ತಿಯ ಹಳ್ಳದಕೇರಿ, ವಕ್ಕಲಗೇರಿ, ಚಾಮಲಾಪುರ, ರಾಜಾಜಿ ಕಾಲೋನಿ, ಸರಸ್ವತಿ ಕಾಲೋನಿ, ಶ್ರೀರಾಂಪುರ,ಶಂಕನಪುರ, ನೀಲಕಂಠ ನಗರ,ಹೌಸಿಂಗ್ ಬೋರ್ಡ್, ತ್ಯಾಗರಾಜ್ ಕಾಲೋನಿ ಗಳಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರು ಭಾನುವಾರ ಮತಯಾಚನೆ ಮಾಡಿದರು.

ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಕೆಪಿಸಿಸಿ ಉಸ್ತುವಾರಿ ಶ್ರೀಕಂಠು ಅವರ ಜೊತೆಗೂಡಿ ಮತಯಾಚನೆ ಮಾಡಿದರು.ನಂತರ ಒಕ್ಕಲಗೇರಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ದರ್ಶನ್ ಧ್ರುವನಾರಾಯಣ್, ನಮ್ಮ ತಂದೆಯ ಸಾವಿನ ನಂತರ ಕ್ಷೇತ್ರದ ಜನರ ಒತ್ತಾಸೆ ಮೇರೆಗೆ ನನಗೆ ಕಾಂಗ್ರೆಸ್ ಪಕ್ಷವು ಅವಕಾಶ ನೀಡಿದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ.

ಇದು ನನ್ನ ಚುನಾವಣೆಯಲ್ಲ. ನಿಮ್ಮ ಚುನಾವಣೆ ಹಾಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ಮತ ನೀಡುವ ಮೂಲಕ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಕ್ಷೇತ್ರದ ಜನರು ಯಾವುದೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತಂದರೆ ಆ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ನನ್ನ ತಂದೆ ಹಾಗೂ ತಾಯಿಯ ಸಾವಿನ ಸಂದರ್ಭದಲ್ಲಿ ನಮ್ಮ ಕುಟುಂಬದ ಜತೆ ನಿಂತು ಸಾಂತ್ವನ ಹೇಳಿ, ಧೈರ್ಯ ನೀಡಿದ ಕ್ಷೇತ್ರದ ಜನರ ಪ್ರೀತಿಗೆ ನಾನು ಅಭಾರಿಯಾಗಿರುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಸಿಎಂ ಶಂಕರ್, ನಗರ ಸಭೆ ಸದಸ್ಯರಾದ ಗಂಗಾಧರ, ಶೇತಲಕ್ಷ್ಮಿ ಸತೀಶ್ ಗೌಡ, ಎಸ್ ಪಿ ಮಹೇಶ್, ಪುರಸಭೆ ಮಾಜಿ ಉಪಾಧ್ಯಕ್ಷ ಮಂಜನಾಥ,ಕಮಲೇಶ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಸೌಭಾಗ್ಯ, ಮಧು ಮಾಲತಿ, ಮಧು ಮಾಲಿನಿ, ಆರ್. ಶಿನಿವಾಸ್, ಒಕ್ಕಲ ಗೇರಿ ರವಿ, ಹಾಗೂ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು