News Karnataka Kannada
Thursday, May 02 2024
ಚಾಮರಾಜನಗರ

ಯಳಂದೂರು: ಬೇಡಿಕೆಗಳ ಈಡೇರಿಕೆಗೆ ಕಬ್ಬು ಬೆಳೆಗಾರರ ಪ್ರತಿಭಟನೆ

Yelandur: Sugarcane growers protest against their demands
Photo Credit : News Kannada

ಯಳಂದೂರು: ಕಬ್ಬು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಪಟ್ಟಣದ ಎಸ್‌ಬಿಐ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಮೂಕಹಳ್ಳಿ ಮಹದೇವಸ್ವಾಮಿ ಮಾತನಾಡಿ, ಕಬ್ಬು ಬೆಳೆಗಾರರಿಗೆ ಟನ್ ಕಬ್ಬಿಗೆ 3500ರೂ. ನಿಗದಿ ಮಾಡಬೇಕು. ಎಫ್‌ಆರ್‌ಪಿ ದರವನ್ನು ಪುನರ್‌ ನಿಗಧಿ ಮಾಡಬೇಕು. ಕಬ್ಬು ಕಟಿಂಗ್ ದರ ಮತ್ತು ಸಾಗಾಣಿಕೆದರ ಟನ್ ಕಬ್ಬಿಗೆ 800 ರೂ. ಯಿಂದ 1000 ರೂ ಆಗಿದ್ದು ಇದನ್ನು ಎಸ್‌ಎಪಿ ಕಾನೂನಿನ ಅನ್ವಯ ನಿಗದಿ ಮಾಡಬೇಕು. ಇದರ ಉಪ ಉತ್ಪನ್ನಗಳಿಂದ ಬರುವ ಲಾಭಾಂಶವನ್ನು ಶೇ. 70-30ರ ಅನುಪಾತದಲ್ಲಿ ರೈತರಿಗೆ ಕೊಡಬೇಕು. ಕಾರ್ಖಾನೆಯಲ್ಲಿ ತೂಕದಲ್ಲಿ ರೈತರಿಗೆ ಆಗುತ್ತಿರುವ ಮೋಸವನ್ನು ತಪ್ಪಿಸಬೇಕು.

ವಿದ್ಯುತ್ ಖಾಸಗೀಕರಣವನ್ನು ತಪ್ಪಿಸಬೇಕು. ರೈತರ ಕೃಷಿ ಭೂಮಿಗಳಿಗೆ ಮೀಟರ್ ಅಳವಡಿಸಿ ಇದಕ್ಕೆ ಆಧಾರ್ ಲಿಂಕ್ ಮಾಡಿಸಿ ಹಣವ ವಸೂಲಿ ಮಾಡಲು ಸರ್ಕಾರ ಹುನ್ನಾರ ನಡೆಸಿದ್ದು ಈ ನಿಯಮ ಸಂಪೂರ್ಣ ರದ್ದಾಗಬೇಕು. ಜಿಲ್ಲೆಯಲ್ಲಿ ಈ ಬಾರಿ ಅತಿಯಾದ ಮಳೆಯಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಸರ್ಕಾರದಿಂದ ಬೆಳೆ ನಷ್ಟ ಪರಿಹಾರವನ್ನು ನೀಡಬೇಕು. ಬ್ಯಾಂಕ್‌ಗಳ ಕಿರುಕುಳವನ್ನು ತಪ್ಪಿಸಬೇಕು ಎಂದರು.

ರಸ್ತೆ ತಡೆಯಿಂದ ಕೆಲಕಾಲ ವಾಹನಗಳ ಓಡಾಟಕ್ಕೆ ತೊಂದರೆಯಾಗಿತ್ತು. ಕಬ್ಬು ಬೆಳೆಗಾರರ ಸಂಘದ ಷಡಕ್ಷರಿ, ಚಂದ್ರಶೇಖರಮೂರ್ತಿ, ಪಟೇಲ್ ಶಿವಮೂರ್ತಿ, ಮಹೇಶ್, ಬಸವಲಿಂಗಪ್ಪ, ಪ್ರಕಾಶ್, ಮಹದೇವಸ್ವಾಮಿ, ಗುರು, ಪುಟ್ಟಸ್ವಾಮಿ, ರಾಜು ಸೇರಿದಂತೆ ಅನೇಕರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು