ಯಳಂದೂರು: ನಾಡ ದಸರಾ ಹಬ್ಬದ ಸಡಗರ ಸಂಭ್ರಮವನ್ನು ಗ್ರಾಮೀಣಾ ಜನರು ಕಣ್ತುಂಬಿಕೂಳ್ಳಲಿ ಎಂಬ ಉದ್ದೇಶದಿಂದ ತಾಲ್ಲೂಕು ಕೇಂದ್ರಗಳಲ್ಲಿ ಗ್ರಾಮೀಣದಸರಾ ಆಚರಣೆ ಮಾಡಿದರೂ ಯಳಂದೂರಿನಲ್ಲಿ ಪ್ರಚಾರ ಕೊರತೆಯಿಂದ ಕಲಾತಂಡಗಳಿಗೆ ಸಿಮೀತವಾಗಿ ನೀರಸವಾಯಿತು.
ಶಾಸಕ ಎನ್.ಮಹೇಶ್ ಚಾಲನೆ ನೀಡಿ ಕಾರ್ಯಕ್ರಮದಿಂದ ಹೋಗುತ್ತಿದಂತೆಯೇ ತಾಲ್ಲೂಕು ಮಟ್ಟದ ಅಧಿಕಾರಿ ವರ್ಗ ಸೇರಿದಂತೆ ಸಿಬ್ಬಂದಿಗಳು ಕೂಡಾ ದಸರಾ ಮೇರವಣಿಗೆಗೆ ಚಕ್ಕರ್ ಹೊಡೆದು ನೆರಳು ಸೇರಿಕೂಂಡರು. ಆದರೆ ಮೆರವಣಿಗೆ ಉದ್ದಕ್ಕೊ ಕೆಲವು ಟೌನ್ ಪಂಚಾಯಿತಿ ಸದಸ್ಯರುಗಳು ಮಾತ್ರ ನಡೆದು ಸಾಗಿದರು. ಆದರೆ ತಹಶೀಲ್ದಾರ್,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ,ಕೃಷಿ ಇಲಾಖೆ, ತೋಟಗಾರಿಕೆ, ಪಶುಸಂಗೋಪನಾ, ಶಿಶುಅಭಿವೃದ್ದಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿ ವರ್ಗ ಸೆಸ್ಕಾಂ, ಅರಣ್ಯ ಇಲಾಖೆ ಸೇರಿದಂತೆ ಅಧಿಕಾರಿಗಳು ಮೆರವಣಿಗೆಯಲ್ಲಿ ಕಾಣಿಸಲಿಲ್ಲ.
ಗ್ರಾಮೀಣ ದಸರಾ ಕಾರ್ಯಕ್ರಮದ ಬಗ್ಗೆ ತಾಲ್ಲೂಕು ಆಡಳಿತ ಗ್ರಾಮೀಣ ಪ್ರದೇಶದ ಸಂಘ ಸಂಸ್ಥೆ,ಮಹಿಳಾ ಸಂಘಟನೆಗಳು,ರೈತ ಸಂಘಟನೆ ಸೇರಿದಂತೆ ಪ್ರಗತಿ ಪರ ಸಂಘಟನೆಗಳಿಗೆ ಗ್ರಾಮೀಣ ದಸರಾ ಮಾಹಿತಿ ನೀಡುವಲ್ಲಿ ವಿಫಲವಾಗಿದೆ. ಮತ್ತು ತಾಲ್ಲೂಕು ಪಂಚಾಯಿತಿ ಆಡಳಿತ ಕೂಡಾ ಗ್ರಾಮ ಪಂಚಾಯಿತಿಗಳಲ್ಲಿ ಡಂಗೂರ ಹೊಡೆಸಿ ಪ್ರಚಾರ ಕೈಗೂಂಡಿದರೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು.
ಇನ್ನೂ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಮಕ್ಕಳಿಗೆ ತಿಳಿಸಿದ್ದರೂ ಗ್ರಾಮೀಣ ದಸರಾಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ, ಆಳಿತತ ವರ್ಗ ಬೇಜವ್ದಾರಿತನದಿಂದಾಗಿ ದಸರಾ ನೀರಸವಾಯಿತು ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.