ಚಾಮರಾಜನಗರ: ಹಾಡು ಹಗಲೇ ಕಾಡಿನಿಂದ ರಸ್ತೆ ಬದಿ ಬಂದ ಕಾಡಾನೆಯೊಂದು ರಸ್ತೆ ಬದಿಯಲ್ಲಿ ಸಂಗ್ರಹವಾಗಿದ್ದ ನೀರನ್ನು ಕುಡಿಯುವ ಮೂಲಕ ತನ್ನ ದಾಹವನ್ನು ನಿವಾರಿಸಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಬಳಿ ನಡೆದಿದೆ.
ಮಹದೇಶ್ವರ ಬೆಟ್ಟದ ಮೂಲಕ ತಮಿಳುನಾಡಿನ ಪಾಲರ್ ಗೆ ತೆರಳುವ ರಸ್ತೆಯ ಮೊದಲ ತಿರುವಿನಲ್ಲಿ ಕಾಡಾನೆಯೊಂದು ದಾಹದಿಂದ ಕಾಡಿನಿಂದ ಹೊರಗೆ ಬಂದು ಹೆದ್ದಾರಿಯಲ್ಲಿ ನಿಂತು ಹಳ್ಳದಲ್ಲಿದ್ದ ನೀರನ್ನು ಕುಡಿಯುವ ದೃಶ್ಯ ದಾರಿಹೋಕರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಅದೀಗ ವೈರಲ್ ಆಗಿದೆ.
ಮಹದೇಶ್ವರ ಬೆಟ್ಟದಲ್ಲಿ ಕಾಡಾನೆಗಳ ಹೆಚ್ಚಾಗಿದ್ದು, ಕರ್ನಾಟಕ ತಮಿಳುನಾಡು ಸಂಪರ್ಕದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದ ಜಾಗೃತರಾಗಿ ಸಂಚರಿಸಿದರೆ ಒಳಿತು ಎನ್ನುವ ಮಾತುಗಳು ಕೇಳಿ ಬರುತ್ತಿದೆ.