ಚಾಮರಾಜನಗರ: ಮೂಲತಃ ಚಾಮರಾಜನಗರ ಜಿಲ್ಲೆಯ ಬಡಗಲಪುರ ಗ್ರಾಮದ ಮುದ್ದಯ್ಯ ಹಾಗು ಗೋಪಮ್ಮ ದಂಪತಿ ತಮ್ಮ 95ರ ಇಳಿ ವಯಸ್ಸಿನಲ್ಲಿ ಕೃಷಿ ಪ್ರೇಮ ಮೆರದಿದ್ದಾರೆ. ಯುವಕರು ಸಹ ಅಚ್ಚರಿಪಡುವಂತೆ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ತಮ್ಮ ಜಮೀನಿನಲ್ಲಿ ಬಾಳೆ ಬೆಳೆ ಜೊತೆ ಇನ್ನಿತರ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವ್ರು ಸಾಕಪ್ಪ ದುಡಿಮೆ ಅಂತ ಎಂದೂ ಸಹ ಕುಳಿತವರಲ್ಲ, ಕೂತು ತಿನ್ನೋದಕ್ಕಿಂತ ದುಡಿದು ತಿನ್ನೋದೇ ಮೇಲು ಎಂಬ ನಾಣ್ಣುಡಿಗೆ ತಕ್ಕಂತಿದೆ ಈ ಜೋಡಿ.
ಬಡಗಲಪುರ ಗ್ರಾಮದ ಕೂಗಳತೆ ಅಂತರದಲ್ಲಿರುವ ಉಗೇಣದಹುಂಡಿಯಲ್ಲಿ ಇರುವ ನಾಲ್ಕು ಎಕರೆ ಜಮೀನಿನಲ್ಲಿ ವಿವಿಧ ರೀತಿಯ ಬೆಳೆಗಳ ಪೋಷಣೆಯಲ್ಲಿ ತೊಡಗಿರುವ ಈ ಅಪರೂಪದ ದಂಪತಿ ಕೃಷಿಯಲ್ಲಿ ಯಶಸ್ಸನ್ನು ಕಂಡಿದ್ದಾರೆ. ಜಮೀನಿನಲ್ಲಿ ಯುವಕರು ಸಹ ನಾಚುವಂತೆ ಕೆಲ್ಸ ಮಾಡುವ ಇವರಿಗೆ ಬೇಸಾಯದ ಮೇಲಿರುವ ಆಸಕ್ತಿ ಅಷ್ಟಿಸಲ್ಲ. ಬಾಳೆ, ರಾಗಿ, ಅರಿಶಿನ, ಮೆಣಸಿನಕಾಯಿ, ತೇಗು, ಬೆಟ್ಟದ ನೆಲ್ಲಿಕಾಯಿ, ತೆಂಗು, ಇನ್ನಿತರ ಹಣ್ಣಿನ ಗಿಡಗಳನ್ನ ಪೋಷಣೆ ಮಾಡುತ್ತ ಬಂದಿರುವ ಇವರು ಹೆಚ್ಚಿನ ಬೇಸಾಯದಲ್ಲಿ ತೊಡಗಿಕೊಳ್ಳಬೇಕು ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ. ಸುಮ್ಮನೆ ಕುಳಿತರೆ ದೇಹ ಜಡಿರು ಹಿಡಿಯುತ್ತೆ ಏನಾದ್ರು ಕೆಲಸ ಮಾಡ್ತಿದ್ರೆ ಹರುಷ ಆಗುತ್ತೆ ಸ್ವಾಮಿ ಅದಕ್ಕೆ ನಾನು ಕೃಷಿ ಕಾಯಕವನ್ನ ಆಯ್ಕೆ ಮಾಡಿಕೊಂಡಿದ್ದೀನಿ ಸ್ವಾಮಿ ಅಂತಾರೆ ಮುದ್ದಯ್ಯ.
ಮುದ್ದಯ್ಯ ಅವ್ರಿಗೆ ಸಾಥ್ ನೀಡಿರುವ ಪತ್ನಿ ಗೋಪಮ್ಮ ಅವ್ರು ಸಹ ಸಮಬಾಗಿತ್ವದ ಬಹುಪಾಲು ಹೊಂದಿದ್ದಾರೆ , ಮಾಧ್ಯಮದವರೊಟ್ಟಿಗೆ ಮಾತನಾಡುತ್ತ ಕರೋಣ ಸಂಧರ್ಭದಲ್ಲಿ ಊರನ್ನ ಬಿಟ್ಟು ಜಮೀನಿಗೆ ಬಂದು ಸೇರಿದ್ವಿ ಅಲ್ಲಿಂದ ಇಲ್ಲಿಯವರೆಗೆ ಕೃಷಿ ಕಾಯಕವನ್ನ ಮಾಡುತ್ತ ಬಂದಿದ್ದೇವೆ, ನಮ್ಮಿಬ್ಬರಿಗೂ ಈಗ ವಯಸ್ಸು 90 ದಾಟಿದೆ ಆದ್ರೂ ಸಹ ಕೆಲಸ ಮಾಡುವ ಛಲ ಮಾತ್ರ ಕಮ್ಮಿಯಾಗಿಲ್ಲ, ಮಕ್ಕಳು ಮೊಮ್ಮಕ್ಕಳು ಎಲ್ಲರೂ ಸಹ ರಜಾ ದಿನಗಳಲ್ಲಿ ಊರಿಗೆ ಬರ್ತಾರೆ ನೋಡಿ ಖುಷಿ ಪಡ್ತಾರೆ ಅಂತ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಈ ವೃದ್ಧ ದಂಪತಿಗಳ ಕೃಷಿ ಪ್ರೇಮ ನೋಡಿದ್ರೆ ಈಗಿನ ಕಾಲಘಟ್ಟದಲ್ಲಿ ವ್ಯವಸಾಯ ಅಂದ್ರೆ ಮೂಗು ಮುರಿಯುವರಿಗೆ ಮಾದರಿಯಾದಂತಿದೆ, ನಾಲ್ಕು ಎಕರೆ ಜಮೀನಿನಲ್ಲಿ ಉತ್ತಮ ಬೆಳೆಯನ್ನ ಬೆಳೆದು ಪೋಷಣೆಯಲ್ಲಿ ತೊಡಗಿರುವ ವೃದ್ಧ ದಂಪತಿ ಯುವಕರು ಇಂದಿನ ಪೀಳಿಗೆಯಲ್ಲಿ ಯುವ ರೈತರಾಗಿ ಬದಲಾದ್ರೆ ಉತ್ತಮ ಬೆಳೆಗಳನ್ನ ಬೆಳೆಯುವುದಲ್ಲದೆ ಜೀವನದಲ್ಲಿ ಗೆಲುವು ಕಾಣಬಹುದು ಎಂಬ ಸಲಹೆಯನ್ನು ಸಹ ನೀಡಿದ್ದಾರೆ.