News Karnataka Kannada
Tuesday, May 07 2024
ಚಾಮರಾಜನಗರ

ಸರ್ಕಾರಿ ಶಾಲೆಯಲ್ಲಿ ಶಿಥಿಲಗೊಂಡ ಕೊಠಡಿಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರು: ಪೋಷಕರಿಗೆ ಆತಂಕ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಥಿಲಗೊಂಡಿರುವ ಕೊಠಡಿಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರು ಮಾಡಲಾಗ್ತಿದೆ ಆದ್ರೆ ಆ ಕೊಠಡಿಯು ಅಡಿಗೆ ತಯಾರು ಮಾಡಲು ಯೋಗ್ಯವಲ್ಲದ್ದಾಗಿದ್ದು ಕ್ರಿಮಿ ಕೀಟಗಳೇನಾದ್ರು ಅಡಿಗೆ ಪಾತ್ರೆಗೆ ಬಿದ್ರೆ ಮಕ್ಕಳ ಜೀವಕ್ಕೆ ಅಪಾಯ ಎದುರಾಗುತ್ತೇ ಅಂತ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
Photo Credit : News Kannada

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಥಿಲಗೊಂಡಿರುವ ಕೊಠಡಿಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರು ಮಾಡಲಾಗ್ತಿದೆ ಆದ್ರೆ ಆ ಕೊಠಡಿಯು ಅಡಿಗೆ ತಯಾರು ಮಾಡಲು ಯೋಗ್ಯವಲ್ಲದ್ದಾಗಿದ್ದು ಕ್ರಿಮಿ ಕೀಟಗಳೇನಾದ್ರು ಅಡಿಗೆ ಪಾತ್ರೆಗೆ ಬಿದ್ರೆ ಮಕ್ಕಳ ಜೀವಕ್ಕೆ ಅಪಾಯ ಎದುರಾಗುತ್ತೇ ಅಂತ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಶಾಸಕ ಮಂಜುನಾಥ್ ಅವರ ಕ್ಷೇತ್ರದಲ್ಲಿ ಈ ರೀತಿಯಾಗಿ ಮೂಲಭೂತ ಸೌಕರ್ಯ ವಂಚಿತ ಶಾಲೆ ಇದಾಗಿದ್ದು ಮಕ್ಕಳಿಗೆ ಬಿಸಿಯೂಟ ತಯಾರು ಮಾಡುವ ಕೊಠಡಿಯು ಸಂಪೂರ್ಣ ಶಿಥಿಲಗೊಂಡಿದೆ ಅಲ್ಲದೆ ಕೊಠಡಿಯ ಮೇಲ್ಬಾಗದ ಪ್ಲಾಸ್ಟರಿಂಗ್ ಕಿತ್ತು ಬರ್ತಿದೆ, ಅಲ್ಲಲ್ಲಿ ಓಡಾಡುವ ಹಲ್ಲಿಗಳು ಅಕಸ್ಮಾತ್ ಪಾತ್ರೆಗೆ ಬಿದ್ರೆ ಮಕ್ಕಳ ಜೀವಕ್ಕೆ ಅಪಾಯ ಎದುರಾಗಲಿದೆ ಎಂದು ಸ್ಥಳೀಯ ಸಮಾಜ ಸೇವಕರಾದ ರಾಜು ಅವ್ರು ಆತಂಕ ವ್ಯಕ್ತಪಡಿಸಿದ್ದಾರೆ.

ಶಾಲೆಯ ದುಸ್ಥಿತಿಯ ಕುರಿತಂತೆ ಜಿಲ್ಲಾಡಳಿತದ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ, ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ಸ್ಥಳೀಯ ಶಾಸಕರಾದ ಮಂಜುನಾಥ್ ಅವ್ರು ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು