ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಥಿಲಗೊಂಡಿರುವ ಕೊಠಡಿಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರು ಮಾಡಲಾಗ್ತಿದೆ ಆದ್ರೆ ಆ ಕೊಠಡಿಯು ಅಡಿಗೆ ತಯಾರು ಮಾಡಲು ಯೋಗ್ಯವಲ್ಲದ್ದಾಗಿದ್ದು ಕ್ರಿಮಿ ಕೀಟಗಳೇನಾದ್ರು ಅಡಿಗೆ ಪಾತ್ರೆಗೆ ಬಿದ್ರೆ ಮಕ್ಕಳ ಜೀವಕ್ಕೆ ಅಪಾಯ ಎದುರಾಗುತ್ತೇ ಅಂತ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಶಾಸಕ ಮಂಜುನಾಥ್ ಅವರ ಕ್ಷೇತ್ರದಲ್ಲಿ ಈ ರೀತಿಯಾಗಿ ಮೂಲಭೂತ ಸೌಕರ್ಯ ವಂಚಿತ ಶಾಲೆ ಇದಾಗಿದ್ದು ಮಕ್ಕಳಿಗೆ ಬಿಸಿಯೂಟ ತಯಾರು ಮಾಡುವ ಕೊಠಡಿಯು ಸಂಪೂರ್ಣ ಶಿಥಿಲಗೊಂಡಿದೆ ಅಲ್ಲದೆ ಕೊಠಡಿಯ ಮೇಲ್ಬಾಗದ ಪ್ಲಾಸ್ಟರಿಂಗ್ ಕಿತ್ತು ಬರ್ತಿದೆ, ಅಲ್ಲಲ್ಲಿ ಓಡಾಡುವ ಹಲ್ಲಿಗಳು ಅಕಸ್ಮಾತ್ ಪಾತ್ರೆಗೆ ಬಿದ್ರೆ ಮಕ್ಕಳ ಜೀವಕ್ಕೆ ಅಪಾಯ ಎದುರಾಗಲಿದೆ ಎಂದು ಸ್ಥಳೀಯ ಸಮಾಜ ಸೇವಕರಾದ ರಾಜು ಅವ್ರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಲೆಯ ದುಸ್ಥಿತಿಯ ಕುರಿತಂತೆ ಜಿಲ್ಲಾಡಳಿತದ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ, ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ಸ್ಥಳೀಯ ಶಾಸಕರಾದ ಮಂಜುನಾಥ್ ಅವ್ರು ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.