ಚಾಮರಾಜನಗರ: ಚಾಮರಾಜನಗರ ವಲಯ ವ್ಯಾಪ್ತಿಯಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆಯಿಂದ ದಾಖಲಿಸಲಾದ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ ಲಕ್ಷಾಂತರ ರೂ ಮೌಲ್ಯದ ಮದ್ಯವನ್ನು ನಾಶಪಡಿಸಲಾಗಿದೆ.
ಅಬಕಾರಿ ಇಲಾಖೆಯು ವಿವಿಧೆಡೆ ದಾಳಿ ಮಾಡಿದ ವೇಳೆ ದೊರೆತ ಅಂದಾಜು ಮೌಲ್ಯ 2,30,000 ರೂ ಮೌಲ್ಯದ 487.560 ಲೀ ಮದ್ಯ ಹಾಗೂ 76.900 ಲೀ ಬಿಯರ್ ದೊರೆತಿತ್ತು. ಈ ಮದ್ಯವನ್ನು ಚಾಮರಾಜನಗರ ವಲಯ ಕಚೇರಿಯ ಆವರಣದಲ್ಲಿ ಚಾಮರಾಜನಗರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಎಂ.ಡಿ.ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ನಾಶಪಡಿಸಲಾಯಿತು.
ಈ ಸಂದರ್ಭ ವಲಯ ಅಬಕಾರಿ ನಿರೀಕ್ಷಕರಾದ ಸಿ.ಎಂ. ಮಹದೇವ, ಚಾಮರಾಜನಗರ ಉಪವಿಭಾಗ ಅಬಕಾರಿ ನಿರೀಕ್ಷಕರಾದ ಎಂ.ಬಿ. ಉಮಾಶಂಕರ್, ಚಾಮರಾಜನಗರ ತಾಲೂಕು ಕಚೇರಿಯ ಗ್ರಾಮ ಆಡಳಿತ ಅಧಿಕಾರಿ ಎಸ್. ಉಜ್ವಲ್, ಕೆ.ಎಸ್.ಬಿ.ಸಿ.ಎಲ್. ಡಿಪೋ ಸಹಾಯಕ ವ್ಯವಸ್ಥಾಪಕರಾದ ಕೆ.ಎಂ. ಸಿದ್ದರಾಜು ಹಾಗೂ ಚಾಮರಾಜನಗರ ವಲಯದ ಸಿಬ್ಬಂದಿ ಆರ್. ರಾಜೇಶ್, ಸಿ. ಮಣಿಕಂಠ, ಆರ್. ರಾಜು ಹಾಜರಿದ್ದರು.