News Karnataka Kannada
Friday, May 03 2024
ಚಾಮರಾಜನಗರ

ಹೆಜ್ಜೇನು ದಾಳಿಯಿಂದ ರಕ್ಷಿಸಿಕೊಳ್ಳಲು ಬಾವಿಗೆ ಹಾರಿದ ವ್ಯಕ್ತಿ

Hejjenu is a man who jumps into a well to save himself from an attack
Photo Credit : News Kannada

ಚಾಮರಾಜನಗರ: ಹನೂರು ತಾಲ್ಲೂಕು ಕೇಂದ್ರ ಸ್ಥಾನದ ತಹೀಸಿಲ್ದಾರ್ ಕಚೇರಿಯ ಬಳಿ ಹೆಜ್ಜೇನು ಹುಳುಗಳು ಹಠಾತ್‌ ದಾಳಿ ನಡೆಸಿದ ಪರಿಣಾಮ ಓರ್ವ ಹೆಜ್ಜೇನು ದಾಳಿಗೆ ಹೆದರಿ ರಕ್ಷಿಸಿಕೊಳ್ಳಲು ಜಮೀನೊಂದರ ಬಾವಿಗೆ ಹಾರಿ ಪಾರಾದ ಘಟನೆ ಭಾನುವಾರದಂದು ನೆಡೆದಿದೆ ಹನೂರು ಪಟ್ಟಣದ ಆರ್ ಎಸ್ ದೂಡ್ಡಿಯ ರಾಜು ಎಂಭಾತನೆ ಹೆಜ್ಜೆನು ಧಾಳಿಗೆ‌ ಒಳಗಾಗಿ ಪಾರಾದ ವ್ಯಕ್ತಿಯಾಗಿದ್ದಾನೆ. ಭಾನುವಾರದಂದು ಹನೂರು ಪಟ್ಟಣದ ತಹೀಸಿಲ್ದಾರ್ ಕಚೇರಿಯ ಸಮೀಪ ನೀರಿನ ಓವರ್ ಹೆಡ್ ಟ್ಯಾಂಕ್ ಮೇಲ್ಬಾಗದಲ್ಲಿ‌ ಕಟ್ಡಿರುವ ಹೆಜ್ಜೇನುಗಳು ಹಠಾತ್ ಧಾಳಿ ನೆಡೆಸಿವೇ ಇದರ ಪರಿಣಾಮ ಸಂಚರಿಸುತ್ತಿದ್ದ ಕೆಲ ಬೈಕ್ ಸವಾರರು ಸೇರಿದಂತೆ ಹಾಸ್ಟಲ್ ವಿದ್ಯಾರ್ಥಿಗಳ‌ ಮೇಲೆಯೂ ದಾಳಿ ನಡೆಸಿದೆ.

ಈ ವೇಳೆ ಕೆಲ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯವಾದರೆ ಆರ್ ಎಸ್ ದೊಡ್ಡಿಯ ರಾಜು ಎಂಬಾತನಿಗೆ ‌ಹೆಜ್ಜೇನು ತೀವ್ರವಾಗಿ ದಾಳಿ‌ ನಡೆಸಿದ್ದು ಆತ ಜೇನುಹುಳುಗಳಿಂದ ರಕ್ಷಿಸಿಕೊಳ್ಳಲು ಧರಿಸಿದ್ದ ಬಟ್ಟೆಯನ್ನೇ ಆಶ್ರಯ ಪಡೆದು ಸಮೀಪದ ಜಮೀನೊಂದರ ಭಾವಿಗೆ ಹಾರಿ ಜೇನುಹುಳುಗಳಿಂದ ಸ್ವಯಂ ರಕ್ಷಣೆಗೆ ಒಳಗಾದ ಅಘಾತಕಾರಿ ಘಟನೆ ನೆಡೆಯಿತು. ಕೂಡಲೆ ಸ್ಥಳೀಯರ ಸಹಾಯದಿಂದ ಆತನನ್ನು ಹನೂರು ಪಟ್ಟಣದ ಖಾಸಗಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ ಈ ಘಟನೆ ತಹಸಿಲ್ದಾರ್ ಗುರುಪ್ರಸಾದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಸಾರ್ವಜನಿಕರು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ಹಠಾತ್ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಬಂದಿದ್ದು ಕೂಡಲೇ
ಹೆಜ್ಜೇನು ತೆರವಿಗೆ ಕ್ರಮವಹಿಸುತ್ತೇನೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು