ಚಾಮರಾಜನಗರ : ‘ಗಡಿ ಜಿಲ್ಲೆಯು ಕನ್ನಡ ನಾಡುನುಡಿಗೆ ತನ್ನದೇ ಆದ ಕೊಡುಗೆ ನೀಡಿದೆ. ಕನ್ನಡದ ವಿಷಯದಲ್ಲಿ ಜಿಲ್ಲೆ ಭಾಷೆಯ ತೊಟ್ಟಿಲು ಇದ್ದಂತೆ. ಪಶ್ಚಿಮದ ಮೂಲೆಹೊಳೆಯಿಂದ ಪೂರ್ವದ ಹೊಗೆನಕಲ್ ವರೆಗಿನ ಪ್ರದೇಶಗಳಲ್ಲಿ ಗಟ್ಟಿ ಕನ್ನಡ ಭಾಷೆ ಮಾತನಾಡುವ ಜನ ಸಮೂಹಗಳಿವೆ’ ಎಂದು ಸೋಮಣ್ಣ ಅವರು ಬಣ್ಣಿಸಿದರು.
ಇದಕ್ಕೂ ಮುನ್ನ ಅವರು ಪೊಲೀಸ್, ಅರಣ್ಯ ರಕ್ಷಕ ದಳ, ಗೃಹ ರಕ್ಷಕ ದಳ, ವಿವಿದ ಶಾಲಾ ವಿದ್ಯಾರ್ಥಿಗಳ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ನಗರದ ಜೆಎಸ್ಎಸ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಸೇವಾ ಭಾರತಿ ಶಾಲೆಯ ವಿದ್ಯಾರ್ಥಿಗಳು ನಾಡುನುಡಿ ಸ್ಮರಿಸುವ ಹಾಡುಗಳಿಗೆ ನೃತ್ಯ ಪ್ರದರ್ಶನ ನೀಡಿದರು.
ಇತ್ತೀಚೆಗೆ ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರ ಸಹಿತ ಅವರ ಸಿನಿಮಾ ಹಾಡುಗಳಿಗೆ ಜೆಎಸ್ಎಸ್ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾಧಿಕಾರಿ ಡಾಎಂ.ಆರ್.ರವಿ, ಜಿ.ಪಂ ಸಿಇಒ ಕೆ.ಎಂ.ಗಾಯತ್ರಿ, ಎಸ್ ಪಿ ದಿವ್ಯಾಸಾರಾ ಥಾಮಸ್ ಇದ್ದರು.