ಹನೂರು: ಅಳಿವಿನಂಚಿನಲ್ಲಿರುವ ವನ್ಯಜೀವಿ ಉಡವನ್ನು ಬೇಟೆಯಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆಹಚ್ಚಿ ಬಂಧಿಸಿರುವ ಘಟನೆ ಕಾವೇರಿ ವನ್ಯಜೀವಿ ವಿಭಾಗ ವಲಯದಲ್ಲಿ ನಡೆದಿದೆ.
ದಂಟಳ್ಳಿ ಗ್ರಾಮದ ಶಿವಮಾದೇವ (45) ಬಂಧಿತ ಆರೋಪಿ. ಈತ ಕೌದಳ್ಳಿ ವನ್ಯಜೀವಿ ವಲಯದ ದಂಟಲ್ಲಿ ಗಸ್ತಿನ ಕುಂಬಾರ ಕೆಂಪನ ಬೋರೆ ಅರಣ್ಯಪ್ರದೇಶದಲ್ಲಿ ಬೇಟೆಯಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಡಿಸಿಎಫ್ ನಂದೀಶ್, ಎಸಿಎಫ್ ಅಂಕ್ ರಾಜು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್.ಎಫ್.ಒ. ಲೋಕೇಶ್ ಚೌಹಣ್, ಡಿ.ಆರ್.ಎಫ್. ಒ ನಾಗಪ್ಪ ತಂದೆ ಪಾಂಡಪ್ಪ, ಅರಣ್ಯ ರಕ್ಷಕ ರವಿ, ಕ್ಷೇಮಾಭಿವೃದ್ಧಿ ನೌಕರರ ಹುಚ್ಚಯ್ಯ, ಹೊರಗುತ್ತಿಗೆ ನೌಕರ ಮಾದೇವ ಭಾಗವಹಿಸಿದ್ದರು.