News Karnataka Kannada
Tuesday, May 07 2024
ಚಾಮರಾಜನಗರ

ಹನೂರು: ಉಡ ಬೇಟೆಯಾಡುತ್ತಿದ್ದ ಬೇಟೆಗಾರನ ಸೆರೆ

Chamaraj
Photo Credit : By Author

ಹನೂರು: ಅಳಿವಿನಂಚಿನಲ್ಲಿರುವ ವನ್ಯಜೀವಿ ಉಡವನ್ನು ಬೇಟೆಯಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆಹಚ್ಚಿ ಬಂಧಿಸಿರುವ ಘಟನೆ ಕಾವೇರಿ ವನ್ಯಜೀವಿ ವಿಭಾಗ ವಲಯದಲ್ಲಿ ನಡೆದಿದೆ.

ದಂಟಳ್ಳಿ ಗ್ರಾಮದ ಶಿವಮಾದೇವ (45) ಬಂಧಿತ ಆರೋಪಿ. ಈತ ಕೌದಳ್ಳಿ ವನ್ಯಜೀವಿ ವಲಯದ ದಂಟಲ್ಲಿ ಗಸ್ತಿನ ಕುಂಬಾರ ಕೆಂಪನ ಬೋರೆ ಅರಣ್ಯಪ್ರದೇಶದಲ್ಲಿ ಬೇಟೆಯಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಡಿಸಿಎಫ್ ನಂದೀಶ್, ಎಸಿಎಫ್ ಅಂಕ್ ರಾಜು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್.ಎಫ್.ಒ. ಲೋಕೇಶ್ ಚೌಹಣ್, ಡಿ.ಆರ್.ಎಫ್. ಒ ನಾಗಪ್ಪ ತಂದೆ ಪಾಂಡಪ್ಪ, ಅರಣ್ಯ ರಕ್ಷಕ ರವಿ, ಕ್ಷೇಮಾಭಿವೃದ್ಧಿ ನೌಕರರ ಹುಚ್ಚಯ್ಯ, ಹೊರಗುತ್ತಿಗೆ ನೌಕರ ಮಾದೇವ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು