News Karnataka Kannada
Wednesday, May 08 2024
ಚಾಮರಾಜನಗರ

ಚಾಮರಾಜನಗರ: ಶಾಸಕ ‌ಎನ್. ಮಹೇಶ್ ವಿರುದ್ಧ ಎ.ದೇವರಹಳ್ಳಿ ಜನರ ಆಕ್ರೋಶ

Chamarajanagar: MLA N. People of A. Devarahalli protest against Mahesh
Photo Credit : By Author

ಚಾಮರಾಜನಗರ: ಮಳೆಯಿಂದಾಗಿ ಯಳಂದೂರು ತಾಲೂಕಿನ ಎ.ದೇವರಹಳ್ಳಿಯಲ್ಲಿ ರಸ್ತೆಯೇ ಕೊಚ್ಚಿ ಹೋಗಿ ಹಲವು ರೀತಿಯ ಸಮಸ್ಯೆ ಎದುರಾಗಿದ್ದರೂ ಶಾಸಕ ಎನ್.ಮಹೇಶ್ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಆಗಸ್ಟ್ ನಲ್ಲಿ ನಿರಂತರ ಮಳೆಯಿಂದಾಗಿ ಉಂಟಾದ ಪ್ರವಾಹದಿಂದಾಗಿ ಹೇಗೋ ಗ್ರಾಮದ ರಸ್ತೆ ಕೊಚ್ವಿ ಹೋಗಿ ಹಾಳಾಗಿದೆ. ಇದರಿಂದ ಸಾರ್ವಜನಿಕರು ಓಡಾಡಲು ತೊಂದರೆಯಾಗಿದೆ ಎಂಬುದು ಗ್ರಾಮಸ್ಥರ ಆಕ್ರೋಶವಾಗಿದೆ.

ಇನ್ನು ಪ್ರತಿಭಟನೆಯಲ್ಲಿ ಭಾಗವಹಿಸಿದ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕಮಲ್ ನಾಗರಾಜ್ ಮಾತನಾಡಿ. ಗ್ರಾಮದ ಕೆಲವು ಮುಖಂಡರು ಗ್ರಾಮದ ಸಮಸ್ಯೆ ಹೊತ್ತು ಶಾಸಕ ಎನ್ ಮಹೇಶ್ ಮನೆಗೆ ಹೋಗಿ ಗ್ರಾಮ ಸಮಸ್ಯೆ ಹೇಳಿಕೊಂಡಾಗ ಶಾಸಕ ಎನ್ ಮಹೇಶ್ ರವರು ರಸ್ತೆ ಏನು ಚಾಪೆನಾ… ನಾ ತಂದು ಹಾಸುಬಿಡ್ಲಾ.. ಎಂದು ಬೇಜವಾಬ್ಧಾರಿ ಮಾತುಗಳನ್ನಾಡಿದ್ದಾರೆ ಎಂದು ದೂರಿದರು.

ಗ್ರಾಮಸ್ಥ ರಾಜಶೇಖರ ಮಾತಾನಾಡಿ ಈ ರಸ್ತೆಯಲ್ಲೇ ಮಕ್ಕಳು, ವಿದ್ಯಾರ್ಥಿಗಳು ವಯಸ್ಸಾದ ವೃದ್ದರು ಗರ್ಭಿಣಿಯರು ಓಡಾಡಬೇಕಾಗಿದೆ. ಆದರೆ‌ ಈ ಢಕ್ ಮಾಡದೆ ಯಾವ ವಾಹನಗಳು ನಮ್ಮ ಗ್ರಾಮಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಅಳಲು ತೋಡಿಕೊಂಡರು.

ಗ್ರಾಮಸ್ಥರ ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ದೌಡಯಿಸಿದ ಜಿಪಂ ಎ.ಇ.ಇ ಹರೀಶ್ ಕುಮಾರ್ ಅವರು ಸದ್ಯಕ್ಕೆ ಜನರು ಓಡಾಡಲು ತಾತ್ಕಾಲಿಕವಾಗಿ ಪೈಪ್ ಗಳನ್ನು ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ದೇವರಳ್ಳಿ ಗ್ರಾಮದ ರಸ್ತೆ ಮತ್ತು ಡಕ್ ಕಾಮಗಾರಿಯನ್ನು ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬಿ.ಎಸ್ಪಿ ಮುಖಂಡ ರಾಜಪ್ಪ, ಪಂಚಾಯಿತಿ ಸದಸ್ಯ ನಾಗೇಂದ್ರ, ಗ್ರಾಮದ ಹಿರಿಯ ಮುಖಂಡರಾದ ಮಹದೇವಪ್ಪ, ರಾಜಶೇಖರ, ವಕೀಲ ರಾಜೇಂದ್ರ, ಅಗ್ರಹಾರ ರಜನಿಕಾಂತ್, ರೈತ ಸಂಘದ ನಾಗರಾಜು, ಸೋಮಣ್ಣ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು