ಚಾಮರಾಜನಗರ: ಅಂಗನವಾಡಿ ಛಾವಣಿ ಕುಸಿತವಾದ ಪರಿಣಾಮ ನಾಲ್ಕು ಮಕ್ಕಳು ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಂಡಿಗೆರೆ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಬಂಡಿಗೆರೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಛಾವಣಿ ಕುಸಿತಗೊಂಡ ಪರಿಣಾಮ ಅಲ್ಲಿದ್ದ ಅಶೋಕ್, ಲಂಕೇಶ್, ಅರ್ಜುನ್, ಜ್ಯೋತಿ ಎನ್ನೋ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿರುದ್ಧ ಕಿಡಿಕಾರಿರುವ ಪೋಷಕರು ಮಕ್ಕಳ ಜೀವಕ್ಕೇನಾದರು ತೊಂದರೆಯಾಗಿದ್ರೆ ಯಾರು ಹೊಣೆ, ಕೊಠಡಿಯ ಸುಸ್ಥಿತಿಯನ್ನ ಪರಿಶೀಲನೆ ನಡೆಸುವಸ್ಟು ಸಮಯ ಇವ್ರಿಗೆ ಇಲ್ಲ ಅಂದ್ಮೇಲೆ ಇವರ ಜವಾಬ್ದಾರಿ ಎಂತದ್ದು ಎಂದು ಪ್ರಶ್ನೆ ಮಾಡಿದ್ದು ಮುಂದಿನ ದಿನಗಳಲ್ಲಿ ಈ ರೀತಿಯಾದ ಘಟನೆ ಸಂಭವಿಸದಂತೆ ಎಚ್ಚರ ವಹಿಸಿ ಎಂದು ಆಗ್ರಹಿಸಿದ್ದಾರೆ.