News Karnataka Kannada
Wednesday, May 08 2024
ಚಾಮರಾಜನಗರ

ಚಾಮರಾಜನಗರ: ಮತಯಾಚನೆಗಿಳಿದ ಹನೂರು ಜೆಡಿಎಸ್ ಅಭ್ಯರ್ಥಿ

Cham
Photo Credit : By Author

ಚಾಮರಾಜನಗರ: ಹನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಆರ್. ಮಂಜುನಾಥ್ ಅವರು ಈಗಾಗಲೇ ಮತಯಾಚನೆಗೆ ಇಳಿದಿದ್ದು, ಕ್ಷೇತ್ರದಾದ್ಯಂತ ಸುತ್ತಾಡಿ ಜನರ ಬಳಿ ಮತಯಾಚಿಸುತ್ತಿರುವುದು ಎದ್ದು ಕಾಣಿಸುತ್ತಿದೆ.

ಈ ನಡುವೆ ಮಾತನಾಡಿದ ಅವರು ಕ್ಷೇತ್ರದ ಯಾವುದೇ ಮೂಲೆಗೆ ಹೋದರೂ ಸಮಸ್ಯೆಗಳ ಸರಮಾಲೆ ಕೇಳಿ ಬರುತ್ತಿವೆ. ಜನರು ಬದುಕಲು ಬೇಕಾದ ಕನಿಷ್ಠ ಮೂಲಭೂತ ಸೌಕರ್ಯಗಳು ಸಿಗದಂತಹ ಪರಿಸ್ಥಿತಿಯಲ್ಲಿದ್ದು, ಕ್ಷೇತ್ರದ ಅಭಿವದ್ಧಿಗಾಗಿ ನಂಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಕ್ಷೇತ್ರ ವ್ಯಾಪ್ತಿಯ ಕರಿಯನಪುರ ಗ್ರಾಮದಲ್ಲಿ ಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ರವರು ಬಡವರ ಪರ ಕಾಳಜಿವುಳ್ಳವರಾಗಿದ್ದು, ರೈತರ ಸಾಲ ಮನ್ನಾ ಮತ್ತು ಜನಪರ ಯೋಜನೆಗಳ ಕನಸನ್ನು ಹೊಂದಿರುವ ಜೆಡಿಎಸ್ ಪಕ್ಷವನ್ನು ನಾವೆಲ್ಲರೂ ಸೇರಿ ಬಲಪಡಿಸಬೇಕಾದ ಮತ್ತು ಪಕ್ಷವನ್ನು ಅಧಿಕಾರಕ್ಕೆ ತರುವ ಅಗತ್ಯ ಮತ್ತು ಅನಿವಾರ್ಯ ನಮಗಿದೆ.

ಹನೂರು ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿಯೂ ಸಂಚಾರ ಮಾಡಿ ಆ ಹಳ್ಳಿಗಳ ಸಮಸ್ಯೆಗಳೇನು ಮತ್ತು ಜನರ ಅಗತ್ಯಗಳೇನು ಎಂಬುದನ್ನು ಅರಿತುಕೊಂಡಿದ್ದೇನೆ. ಅದಕ್ಕೆ ಪೂರಕವಾಗಿ ಕ್ಷೇತ್ರದ ಜನತೆಗೆ ಒಂದಿಷ್ಟು ಅಳಿಲು ಸೇವೆ ಮಾಡುತ್ತಿದ್ದೇನೆ. ರಾಜಕೀಯ ಅಧಿಕಾರ ಮತ್ತು ಸ್ಥಾನಮಾನಗಳು ಲಭಿಸಿದರೆ ಸಂಪೂರ್ಣವಾಗಿ ನಿಮ್ಮ ಸೇವೆಮಾಡಲು ಮಾಡಲು ಮುಂದೆ ಬರುವ ಚುನಾವಣೆಯಲ್ಲಿ ನನಗೊಂದು ಅವಕಾಶ ನೀಡಿ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಹಲವು ಯುವ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಜೆಡಿಎಸ್ ಮುಖಂಡರಾದ ಶಿವಮೂರ್ತಿ, ಮಂಜೇಶ್, ಗೋಪಾಲ್ ನಾಯ್ಕ, ಹನೂರು ಗೋವಿಂದ, ನಿಂಗಶೆಟ್ಟಿ, ಮಹಾದೇವ, ಕರಿಯನಪುರ ಗ್ರಾಮದ ಕೆ.ರಾಜು, ಕುಮಾರ ಹಾಗೂ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು