ಚಾಮರಾಜನಗರ: ಮಗಳನ್ನು ಪ್ರೀತಿಸಿ ಪ್ರೇಮ ವಿವಾಹವಾಗಿದ್ದ ಅಳಿಯನನ್ನು ಮಾವನೇ ಕೊಲೆ ಮಾಡಲು ಯತ್ನಿಸಿದ ಘಟನೆ ಸಮೀಪದ ತಾಳವಾಡಿ ತಾಲ್ಲೂಕಿನ ತಿಗಣಾರೆ ಗ್ರಾಮದಲ್ಲಿ ನಡೆದಿದೆ.
ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ತಿಗಣಾರೆ ಗ್ರಾಮದ ವಿಘ್ನೇಶ್ ( 27) ಮಾರಣಾಂತಿಕ ಹಲ್ಲೆಗೊಳಗಾದ ಯುವಕ. ಕಳೆದ ಐದು ತಿಂಗಳ ಹಿಂದೆ ವಿಘ್ನೇಶ್ ಪುರೋಹಿತ ಬಾಲರಾಜ್ ರವರ ಪುತ್ರಿ ಜ್ಯೋತಿ (21) ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದನು. ಇವರ ಮದುವೆಗೆ ಬಾಲರಾಜ್ ಕುಟುಂಬ ವಿರೋಧ ವ್ಯಕ್ತಪಡಿಸಿತ್ತು.
ಈ ನಡುವೆ ಆರೋಪಿ ಬಾಲರಾಜ್ ತನ್ನ ಅಳಿಯನ ಹತ್ಯೆಗೆ ಹೊಂಚು ಹಾಕಿ ಭಾನುವಾರ ರಾತ್ರಿ ಮನೆಯಲ್ಲಿದ್ದ ವಿಘ್ನೇಶ್ ಗೆ ಖಾರದ ಪುಡಿ ಎರಚಿ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಕಂಗಲಾದ ವಿಘ್ನೇಶ್ ಕಿರುಚಿಕೊಂಡಾಗ ನೆರೆ ಹೊರೆಯವರು ಬರುವಷ್ಟರಲ್ಲಿ ಬಾಲರಾಜು, ತೊಳಸಿಯಮ್ಮ ಹಾಗೂ ರಾಹುಲ್ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದದ್ದ ವಿಘ್ನೇಶ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ತಾಳವಾಡಿ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ ಬಾಲರಾಜು ಸಹಿತ ಮೂವರನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ.