News Karnataka Kannada
Wednesday, May 01 2024
ಚಾಮರಾಜನಗರ

ಚಾಮರಾಜನಗರ: ಮಾವನಿಂದ ಅಳಿಯನ ಹತ್ಯೆಗೆ ಯತ್ನ

Chamarajanagar: Father-in-law attempts to kill son-in-law
Photo Credit : By Author

ಚಾಮರಾಜನಗರ: ಮಗಳನ್ನು ಪ್ರೀತಿಸಿ ಪ್ರೇಮ ವಿವಾಹವಾಗಿದ್ದ ಅಳಿಯನನ್ನು ಮಾವನೇ ಕೊಲೆ ಮಾಡಲು ಯತ್ನಿಸಿದ ಘಟನೆ ಸಮೀಪದ ತಾಳವಾಡಿ ತಾಲ್ಲೂಕಿನ ತಿಗಣಾರೆ ಗ್ರಾಮದಲ್ಲಿ ನಡೆದಿದೆ.

ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ತಿಗಣಾರೆ ಗ್ರಾಮದ ವಿಘ್ನೇಶ್ ( 27) ಮಾರಣಾಂತಿಕ ಹಲ್ಲೆಗೊಳಗಾದ ಯುವಕ. ಕಳೆದ ಐದು ತಿಂಗಳ ಹಿಂದೆ ವಿಘ್ನೇಶ್ ಪುರೋಹಿತ ಬಾಲರಾಜ್ ರವರ ಪುತ್ರಿ ಜ್ಯೋತಿ (21) ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದನು. ಇವರ ಮದುವೆಗೆ ಬಾಲರಾಜ್ ಕುಟುಂಬ ವಿರೋಧ ವ್ಯಕ್ತಪಡಿಸಿತ್ತು.

ಈ ನಡುವೆ ಆರೋಪಿ ಬಾಲರಾಜ್ ತನ್ನ ಅಳಿಯನ ಹತ್ಯೆಗೆ ಹೊಂಚು ಹಾಕಿ ಭಾನುವಾರ ರಾತ್ರಿ ಮನೆಯಲ್ಲಿದ್ದ ವಿಘ್ನೇಶ್ ಗೆ ಖಾರದ ಪುಡಿ ಎರಚಿ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಕಂಗಲಾದ ವಿಘ್ನೇಶ್ ಕಿರುಚಿಕೊಂಡಾಗ ನೆರೆ ಹೊರೆಯವರು ಬರುವಷ್ಟರಲ್ಲಿ ಬಾಲರಾಜು, ತೊಳಸಿಯಮ್ಮ ಹಾಗೂ ರಾಹುಲ್ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದದ್ದ ವಿಘ್ನೇಶ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ತಾಳವಾಡಿ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ ಬಾಲರಾಜು ಸಹಿತ ಮೂವರನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು