ಚಾಮರಾಜನಗರ: ನೆರೆರಾಜ್ಯ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಇದ್ದಕ್ಕಿದ್ದಂತೆ ಹಕ್ಕಿಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ಕೇರಳದ ಗಡಿಭಾಗ ಮೂಲೆಹೊಳೆಯಲ್ಲಿ ಪಶುಪಾಲನೆ ಇಲಾಖೆ ಬಿಗಿ ಕಟ್ಟೆಚ್ಚರ ವಹಿಸಿದೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ಎರಡು ಹಳ್ಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು ದೃಢವಾಗಿರುವ ನಿಟ್ಟಿನಲ್ಲೇ ಜ್ವರ ಕಾಣಿಸಿಕೊಂಡಿರುವ ಕೋಳಿ ಮತ್ತು ಬಾತುಕೋಳಿಗಳನ್ನು ಧಮನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದೀಗ ಕೇರಳ ಮತ್ತು ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಗಡಿಭಾಗಗಳಲ್ಲಿ ಕಟ್ಟು ನಿಟ್ಟಿನ ಎಚ್ಚರಿಕೆ ವಹಿಸಲಾಗಿದೆ.
ಅದರಲ್ಲೂ ಚಾಮರಾಜನಗರ ಮತ್ತು ಕೇರಳದ ನಡುವೆ ಹೆಚ್ಚಿನ ಸಂಪರ್ಕವಿದ್ದು ಅಲ್ಲಿಂದ ದಿನನಿತ್ಯವೂ ಚಾಮರಾಜಗರ ಜಿಲ್ಲೆ ಮೂಲಕ ರಾಜ್ಯಕ್ಕೆ ಸರಕು ಸಾಗಾಣಿಕೆ ವಾಹನಗಳು ಬರುತ್ತಿದ್ದು ಇದೀಗ. ಕೇರಳ ರಾಜ್ಯದಿಂದ ಒಳಬರುವ ಗೂಡ್ಸ್ ವಾಹನಗಳಿಗೆ ಹೈಮೊಕ್ಲೋರೈಡ್ ಔಷಧಿ ದ್ರಾವಣವನ್ನ ಸಿಂಪಡಿಸಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗ್ತಿದ್ದು ಹಕ್ಕಿಜ್ವರ ಹತೋಟಿಗೆ ಬರುವ ತನಕ ಕೇರಳದಿಂದ ರಾಜ್ಯದೊಳಗೆ ಕೋಳಿ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ ಎಂದು ಪಶುಪಾಲನ ಇಲಾಖೆ ತಿಳಿಸಿದೆ.