News Karnataka Kannada
Tuesday, May 07 2024
ಚಾಮರಾಜನಗರ

ಚಾಮರಾಜನಗರ: ಕಾಡುಗಳ್ಳರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ರಾಣಾ ಇನ್ನಿಲ್ಲ

Bandipur sniffer dog Rana cremated
Photo Credit : By Author

ಚಾಮರಾಜನಗರ: ಕಾಡುಗಳ್ಳರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಬಂಡೀಪುರದ ಹಂಟಿಂಗ್ ಸ್ಪೆಷಲಿಸ್ಟ್ ರಾಣಾ ಶ್ವಾನ (9) ಸೋಮವಾರ ರಾತ್ರಿ ವಯೋಸಹಜದಿಂದ ಅಸುನೀಗಿದೆ.

ರಾಣನಿಗೆ ವಯಸ್ಸಾದ ಕಾರಣ ನಿವೃತ್ತಿ ನೀಡಲು ಅರಣ್ಯ ಇಲಾಖೆ ಚಿಂತನೆ ನಡೆಸಿತ್ತು. ಆದರೆ ಇಂದು ಬೆಳಗ್ಗೆ ರಾಣ ಕೊನೆಯುಸಿರೆಳೆದಿದ್ದಾನೆ. ಸದ್ಯ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಇಲಾಖೆ ತೀರ್ಮಾನಿಸಿದೆ.

ಅರಣ್ಯ ಇಲಾಖೆಯ ಹೆಮ್ಮೆಯಾಗಿದ್ದ ರಾಣಾ ಸಾಮಾನ್ಯವಾದ ಶ್ವಾನ ಆಗಿರಲಿಲ್ಲ. ಕಳ್ಳ ಬೇಟೆಗಾರರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ರಾಣಾ ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಸೈ ಎನಿಸಿಕೊಂಡಿದ್ದ. ಹಲವು ಕಳ್ಳತನ ಪ್ರಕರಣ ಭೇಧಿಸುವಲ್ಲಿ ರಾಣಾನ ಪಾತ್ರಕೂಡ ದೊಡ್ಡದು. ಕೇವಲ ಬಂಡೀಪುರದಲ್ಲಿ ಮಾತ್ರವಲ್ಲ ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದಲ್ಲೂ ಹುಲಿ‌ ಕಾರ್ಯಾಚರಣೆಯಲ್ಲಿಯೂ ರಾಣಾ ಭಾಗಿಯಾಗದ್ದ. ಇಂತಹ ಧೈರ್ಯಶಾಲಿ ರಾಣಾನನ್ನು ಕಳೆದುಕೊಂಡ ಅರಣ್ಯ ಇಲಾಖೆ ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ.

ಇಂದು ಬೆಳಗ್ಗೆ ರಾಣಾ ಕೊನೆಯುಸಿರೆಳೆದಿದ್ದಾನೆ. ಸಕಲ ಸರ್ಕಾರಿ ಗೌರವಗಳೊಂದಿಗೆ ರಾಣಾನ ಅಂತ್ಯಕ್ರಿಯೆ ನೆರವೇರಿಸಲು ಅರಣ್ಯ ಸಿಬ್ಬಂದಿ ಇಲಾಖೆ ಸಿಬ್ಬಂದಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು