News Karnataka Kannada
Saturday, April 27 2024
ಚಾಮರಾಜನಗರ

ಹನೂರು ಬಳಿ ಜಾನುವಾರುಗಳಿಗೆ ಮಚ್ಚಿನಿಂದ ಹಲ್ಲೆ ಮಾಡಿದ ಕಿಡಿಗೇಡಿಗಳು

ಚಾಮರಾನಗರ. ಜಿಲ್ಲೆಯ ಹನೂರು ತಾಲ್ಲೂಕಿನ ಒಡೆಯರಪಾಳ್ಯದ ಸಿ ವಿಲೇಜ್ ಸಮೀಪ 15 ಕ್ಕೂ ಹೆಚ್ಚು ಜಾನುವಾರುಗಳ ಕಾಲುಗಳಿಗೆ  ಕಿಡಿಗೇಡಿಗಳು ಮಚ್ಚಿನಿಂದ ಕಡಿದಿರುವ ಘಟನೆ ನಡೆದಿದೆ.
Photo Credit : By Author

ಚಾಮರಾಜನಗರ: ಚಾಮರಾನಗರ ಜಿಲ್ಲೆಯ ಹನೂರು ತಾಲ್ಲೂಕಿನ ಒಡೆಯರಪಾಳ್ಯದ ಸಿ ವಿಲೇಜ್ ಸಮೀಪ 15 ಕ್ಕೂ  ಹೆಚ್ಚು ಜಾನುವಾರುಗಳ ಕಾಲುಗಳಿಗೆ ಕಿಡಿಗೇಡಿಗಳು ಮಚ್ಚಿನಿಂದ ಕಡಿದಿರುವ ಘಟನೆ ನಡೆದಿದೆ.

ಹುತ್ತೂರು ಗ್ರಾಪಂ ವ್ಯಾಪ್ತಿಯ ಬಸವರಾಜು, ರಘು, ಸಿದ್ದಪ್ಪ ಎಂಬುವರಿಗೆ ಸೇರಿದಂತಹ ಜಾನುವಾರುಗಳ  ಮೇಲೆ  ಹಲ್ಲೆ ಮಾಡಲಾಗಿದೆ. ಜಾನುವಾರಗಳ ಪಾಲಕರು ಮೇಯಲು ಗುಂಡಿಮಾಳ ಆಸುಪಾಸಿನಲ್ಲಿ ಬಿಟ್ಟಿದ್ದ ಸಂದರ್ಭದಲ್ಲಿ ಜಮೀನುಗಳಿಗೆ ನುಗ್ಗಿದೆ ಎಂದು  ತೇಜು ಎಂಬ ಟಿಬೇಟ್ ವ್ಯಕ್ತಿ ಜಾನುವಾರುಗಳ ಮೇಲೆ ಹಲ್ಲೆ ಮಾಡಿದ್ದಾನೆ  ಎಂದು ಆರೋಪಿಸಲಾಗಿದೆ.

ಈ ಕೃತ್ಯವನ್ನು ಕಂಡಂತಹ ಜಾನುವಾರುಗಳ ಪಾಲಕರು ಗೋಳಾಡುತ್ತಿರುವಂತಹ ದೃಶ್ಯ ಮನಕಲಕುವಂತಿತ್ತು. ಘಟನಾ ಸ್ಥಳಕ್ಕೆ ಹನೂರು ಪೋಲಿಸರು ತೆರಳಿ ಮುಂದಿನ ಕ್ರಮಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು