ಚಾಮರಾಜನಗರ: ಚಾಮರಾನಗರ ಜಿಲ್ಲೆಯ ಹನೂರು ತಾಲ್ಲೂಕಿನ ಒಡೆಯರಪಾಳ್ಯದ ಸಿ ವಿಲೇಜ್ ಸಮೀಪ 15 ಕ್ಕೂ ಹೆಚ್ಚು ಜಾನುವಾರುಗಳ ಕಾಲುಗಳಿಗೆ ಕಿಡಿಗೇಡಿಗಳು ಮಚ್ಚಿನಿಂದ ಕಡಿದಿರುವ ಘಟನೆ ನಡೆದಿದೆ.
ಹುತ್ತೂರು ಗ್ರಾಪಂ ವ್ಯಾಪ್ತಿಯ ಬಸವರಾಜು, ರಘು, ಸಿದ್ದಪ್ಪ ಎಂಬುವರಿಗೆ ಸೇರಿದಂತಹ ಜಾನುವಾರುಗಳ ಮೇಲೆ ಹಲ್ಲೆ ಮಾಡಲಾಗಿದೆ. ಜಾನುವಾರಗಳ ಪಾಲಕರು ಮೇಯಲು ಗುಂಡಿಮಾಳ ಆಸುಪಾಸಿನಲ್ಲಿ ಬಿಟ್ಟಿದ್ದ ಸಂದರ್ಭದಲ್ಲಿ ಜಮೀನುಗಳಿಗೆ ನುಗ್ಗಿದೆ ಎಂದು ತೇಜು ಎಂಬ ಟಿಬೇಟ್ ವ್ಯಕ್ತಿ ಜಾನುವಾರುಗಳ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕೃತ್ಯವನ್ನು ಕಂಡಂತಹ ಜಾನುವಾರುಗಳ ಪಾಲಕರು ಗೋಳಾಡುತ್ತಿರುವಂತಹ ದೃಶ್ಯ ಮನಕಲಕುವಂತಿತ್ತು. ಘಟನಾ ಸ್ಥಳಕ್ಕೆ ಹನೂರು ಪೋಲಿಸರು ತೆರಳಿ ಮುಂದಿನ ಕ್ರಮಕೈಗೊಂಡಿದ್ದಾರೆ.