ಚಾಮರಾಜನಗರ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಮಲೇಮಹದೇಶ್ವರ ಬೆಟ್ಟದ ತಾಳು ಬೆಟ್ಟದ ಸಮೀಪ ಬಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡು ಭಕ್ತರು ಭೀತಿಗೊಳಗಾಗಿರುವ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಮಲೇ ಮಹದೇಶ್ವರ ಬೆಟ್ಟದ ನಡು ರಸ್ತೆಯಲ್ಲಿ ಬಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದೆ. ಮಾದಪ್ಪನ ಸನ್ನಿಧಿಗೆ ತೆರಳುವ ಮಾರ್ಗ ಮಧ್ಯದ ತಾಳು ಬೆಟ್ಟದ ಬಳಿ ರಾತ್ರಿ 9 ರ ವೇಳೆ ಕಾಣಿಸಿಕೊಂಡು ಪಾದಚಾರಿ ಯಾತ್ರಾರ್ಥಿಗಳು ಭಯಭೀತಿಗೊಳಗಾಗುವಂತೆ ಮಾಡಿದೆ, ಮಾದಪ್ಪನ ಸನ್ನಿಧಿಗೆ ಹರಕೆ ಹೊತ್ತು ಕಾಲ್ನಡಿಗೆಯಲ್ಲಿ ತೆರಳುವ ಭಕ್ತ ಸಮೂಹ ರಾತ್ರಿ ವೇಳೆ ಮರದ ಕೆಳಗೆ ಆಶ್ರಯ ಪಡೆಯುತ್ತಾರೆ ಒಂದು ವೇಳೆ ಮಲಗಿದ್ದ ಭಕ್ತರ ಮೇಲೆ ಹೆಬ್ಬಾವು ದಾಳಿ ನಡೆಸಿದ್ರೆ ಗತಿಯೇನು ಎಂದು ಭಕ್ತರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.