ಹನೂರು ತಾಲ್ಲೂಕಿನ ಪುಷ್ಪಾಪುರ ಗ್ರಾಮದ ಕಬ್ಬಾಲ(65) ಬುನ್ ರಂಗಶೆಟ್ಟಿ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಗಾಂಜಾ ಸಂಗ್ರಹಣೆ ಮಾಡಿರುವುದಾಗಿ ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ದೊರೆತಿದೆ.
ಮಾಹಿತಿಯನ್ವಯ ಅಬಕಾರಿ ಆಯುಕ್ತ ಮಾದೇಶ್, ಉಪಾಯುಕ್ತ ಮುರಳಿ ಅವರ ಸೂಚನೆ ಮೇರೆಗೆ ಅಬಕಾರಿ ಡಿವೈಎಸ್ಪಿ ಮೋಹನ್ಕುಮಾರ್ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ನಂದಿನಿ ಮತ್ತು ತಂಡ ಗುರುವಾರ ಮುಂಜಾನೆಯೇ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು 4 ಕೆ.ಜಿ.935ಗ್ರಾಂ ಒಣಗಾಂಜಾವನ್ನು ವಶಪಡಿಸಿಕೊಂಡು ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ದಾಳಿಯಲ್ಲಿ ಅಬಕಾರಿ ಇಲಾಖೆಯ ಮೀನಾ, ಮಣಿಕಂಠ, ಮಹೇಂದ್ರ, ಸೋಮಣ್ಣ, ವೀರತಪ್ಪ, ಸಿದ್ಧಯ್ಯ ಇನ್ನಿತರರು ಹಾಜರಿದ್ದರು.