ಗುಂಡ್ಲುಪೇಟೆ: ಮೊಳಕೆ ಹುರುಳಿ ಸಾಂಬಾರು ಸೇವಿಸಿ 31 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚಿರಕನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶುಕ್ರವಾರ ಮಧ್ಯಾಹ್ನ ಬಿಸಿಯೂಟದ ಬಳಿಕ ಶಾಲೆಯ 31 ಮಂದಿ ಮಕ್ಕಳಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ, ಅಡುಗೆ ಸಿಬ್ಬಂದಿ ಸುಮಾರು ಐದು ದಿನಗಳ ಹಿಂದೆ ಮೊಳಕೆ ಕಟ್ಟಿದ್ದ ಕಾಳುಗಳನ್ನು ಸಾಂಬಾರಿಗೆ ಬಳಸಿದ್ದಾರೆ ಮೊಳಕೆ ಕಟ್ಟಿ ಐದು ದಿನಗಳಾಗಿದ್ದ ಪರಿಣಾಮ ತಿನ್ನಲು ಯೋಗ್ಯವಲ್ಲವಾಗಿತ್ತು ಆದರೆ ಅಡಿಗೆ ಸಿಬ್ಬಂದಿ ಇದೆ ಕಾಳುಗಳನ್ನ ಬಳಕೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಕ್ಕಳು ಅಸ್ವಸ್ಥಗೊಂಡ ಕಾರಣ ಬೊಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.