ಚೆನ್ನೈ: ಕೊಯಂಬತ್ತೂರಿನಲ್ಲಿ ರೋಡ್ ಶೋ ನಡೆಸಲು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಅನುಮತಿ ನೀಡುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಪೋಲಿಸರಿಗೆ ಆದೇಶಿಸಿದ್ದು, ಕೆಲ ಶರತ್ತುಗಳನ್ನು ವಿಧಿಸಿದೆ.
ನಗರದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಮತ್ತು ಪರೀಕ್ಷೆಗಳಿದ್ದುದರಿಂದ ರೋಡ್ ಶೋಗೆ ಅನುಮತಿ ನಿರಾಕರಿಸಲಾಗಿತ್ತು. ಯಾವ ಪಕ್ಷದ ಪ್ರಚಾರಗಳಿಗೂ ಅನುಮತಿ ಕೊಟ್ಟಿಲ್ಲವೆಂದು ತಿಳಿಸುವ ಮೂಲಕ ಇದರಲ್ಲಿ ಯಾವುದೇ ತಾರತಮ್ಯ ಇಲ್ಲವೆಂದು ಪೋಲೀಸರು ತಿಳಿಸಿದರು.
ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವಾಗ ಪ್ರಧಾನಿಗಳು ಪ್ರಚಾರಕ್ಕೆಂದು ದಕ್ಷಿಣದ ರಾಜ್ಯಗಳ ಕಡೆ ಮುಖ ಮಾಡಿದ್ದಾರೆ.