ಮೈಸೂರು: ಸ್ವಚ್ಛತೆ ಇರುವಲ್ಲಿ ದೇವರು ವಾಸವಿರುತ್ತಾರೆ ಎಂಬ ಮಾತಿದೆ. ಅದರಂತೆ ಶಿವರಾತ್ರಿ ದಿನವೂ ಸ್ವಚ್ಛತೆಗೆ ಆದ್ಯತೆ ನೀಡಿದ ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಅವರು ತಮ್ಮ ನೇತೃತ್ವದಲ್ಲಿ ದೇಗುಲವನ್ನು ಸ್ವಚ್ಛಗೊಳಿಸುವ ಮೂಲಕ ಶಿವರಾತ್ರಿ ಆಚರಿಸಿದ್ದಾರೆ.
ನಗರದ ಸಂತೆಪೇಟೆ ಯಲ್ಲಿರುವ ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಸ್ಥಾನ ವನ್ನು ಹಬ್ಬದ ಹಿನ್ನಲೆಯಲ್ಲಿ ಸ್ವಚ್ಛಗೊಳಿಸಿ ಮಾತನಾಡಿದ ಪ್ರಮೀಳಾ ಭರತ್ ಅವರು, ಮನಸ್ಸಿನ ಸ್ವಚ್ಚತೆಗೆ ಪರಿಸರ ಸ್ವಚ್ಛತೆಯೂ ಪ್ರಧಾನವಾಗಿದೆ. ಅಂತೆಯೇ ಮನಶಾಂತಿಗೆ ಹಾಗೂ ಪ್ರಶಾಂತ ವಾತಾವರಣದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಬರುವ ಭಕ್ತರಿಗೆ ದೇವಾಲಯದ ಪರಿಸರ ಸ್ವಚ್ಚವಾಗಿರಬೇಕೆಂಬ ಉದ್ದೇಶದಿಂದ ದೇಗುಲ ಸೇರಿದಂತೆ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸಿರುವುದಾಗಿ ಹೇಳಿದರು.
ಈ ವೇಳೆ ಚಾಮರಾಜ ಯುವಮೋರ್ಚಾ ಅಧ್ಯಕ್ಷ ಸಚಿನ್, ಮಹಿಳಾ ಕಾರ್ಯಕರ್ತರಾದ ರಚನಾ, ಚಂದ್ರಕಲಾ, ಪಾಪಣ್ಣ, ಗಣೇಶ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರು ಚರಣ್ ಹಾಗೂ ಇನ್ನಿತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.