News Karnataka Kannada
Monday, May 06 2024
ಚಾಮರಾಜನಗರ

ರಾಂಪುರದಿಂದ ನಾಪತ್ತೆಯಾಗಿದ್ದ ಭಾಸ್ಕರ ಕೇರಳದಲ್ಲಿ ಪತ್ತೆ

Elephant
Photo Credit : News Kannada

ಚಾಮರಾಜನಗರ : ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ರಾಂಪುರ ಆನೆ ಶಿಬಿರದ ಸಾಕಾನೆ ಭಾಸ್ಕರ ಕಳೆದ ಕೆಲವು ತಿಂಗಳಿಂದ ನಾಪತ್ತೆಯಾಗಿದ್ದು, ಇದೀಗ ಪಕ್ಕದ ಕೇರಳ ರಾಜ್ಯದ ಕಾಡಿನಲ್ಲಿದೆ ಎನ್ನುವುದು ತಿಳಿದು ಬಂದಿದೆ.

ಶ್ರೀರಾಂಪುರ ಆನೆ ಶಿಬಿರದಲ್ಲಿದ್ದ ಹತ್ತು ವರ್ಷದ ಭಾಸ್ಕರ ಹೊಸ ಪರಿಸರ ಹುಡುಕಿಕೊಂಡು ಅರಣ್ಯದಲ್ಲಿ ತೆರಳಿದ್ದು, ಕಳೆದ ಕೆಲವು ತಿಂಗಳ ಹಿಂದಷ್ಟೇ ಕಬಿನಿ ಹಿನ್ನೀರು ದಾಟಿ ನಾಗರಹೊಳೆ ಅಭಯಾರಣ್ಯ ಸೇರಿತ್ತು. ಇದೀಗ ಕೇರಳ ಅರಣ್ಯದಲ್ಲಿನ ಕಾಡಾನೆಗಳನ್ನು ಸೇರಿಕೊಂಡಿದೆ ಎಂದು ಹೇಳಲಾಗಿದೆ.

ಶ್ರೀ ರಾಂಪುರ ಆನೆ ಶಿಬಿರಕ್ಕೆ ಹೊಂದಿಕೊಂಡಂತಿರುವ ಕೇರಳ ಅರಣ್ಯದ ನಲ್ಲತನ್ನಿ ಕ್ಯಾಂಪ್ ಸುತ್ತ ಭಾಸ್ಕರ ಅಡ್ಡಾಡಿರುವ ಬಗ್ಗೆ ಮಾಹಿತಿ ಬಂದಿದ್ದು, ಅದರ ಕೊರಳಲ್ಲಿ ಗಂಟೆ ಕಟ್ಟಿರುವುದರಿಂದ ಅದನ್ನು ಪತ್ತೆಹಚ್ಚುವುದು ಸುಲಭವಾಗಿದ್ದು, ಕೇರಳದ ವೈನಾಡು ವನ್ಯಜೀವಿ ವಲಯದ ನಲ್ಲತನಿ ಭಾಗದಲ್ಲಿ ಕಾಡಾನೆಗಳ ಜೊತೆ ಇರುವುದನ್ನು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಾಕಾನೆ ಭಾಸ್ಕರನನ್ನು ಹಿಡಿಯಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಆದೇಶ ಸಿಕ್ಕ ತಕ್ಷಣ ಕೇರಳದತ್ತ ಹೆಜ್ಜೆ ಹಾಕಿರುವ ಭಾಸ್ಕರ ಆನೆಯನ್ನು ಸೆರೆ ಹಿಡಿದು ಕರೆತರಲಾಗುವುದು ಎಂದು ಬಂಡೀಪುರ ಹುಲಿ ಯೋಜನೆ ಪ್ರಭಾರ ನಿರ್ದೇಶಕ ಕರಿಕಾಳನ್ ಹೇಳಿದ್ದಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು