ಮಂಗಳೂರು : ಉಪ್ಪಿನಂಗಡಿಯಲ್ಲಿ ನಡೆದ ಲಾಠಿ ಚಾರ್ಜ್ ಪ್ರಕರಣದಲ್ಲಿ ನಮ್ಮ ಕಾರ್ಯಕರ್ತರ ಮೇಲಿನ ಆರೋಪಕ್ಕೆ ತಕ್ಕುದಾದ ಫೋಟೊ ವೀಡಿಯೊ ದೃಶ್ಯಾವಳಿ ಬಹಿರಂಗಪಡಿಸಿ ಎಂದು ಪಿಎಫ್ ಐ ರಾಜ್ಯ ಕಾರ್ಯದರ್ಶಿ ಎ ಕೆ ಅಶ್ರಫ್ ಪೊಲೀಸ್ ಇಲಾಖೆಗೆ ಸವಾಲ್ ಸವಾಲೆಸೆದಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾವು ಪ್ರತಿಭಟನೆ ನಡೆಸುತ್ತಿರುವ ಸಂದರ್ಭ ಎಂಟರಿಂದ ಹತ್ತು ಪೊಲೀಸರು ಘಟನೆಯ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದರು ನಮ್ಮ ಕಾರ್ಯಕರ್ತರು ಕಲ್ಲು ಬಿಸಾಡುವ ಇಲಾಖೆಯ ಜೀಪು , ಠಾಣೆಯ ವಸ್ತು ಪುಡಿಗಟ್ಟುವ ವಿಡಿಯೋ ಬಿಡುಗಡೆ ಮಾಡಿ . ಠಾಣೆಯ ಒಳಗೆ ಒಂದೂವರೆ ಗಂಟೆಗಳ ಕಾಲ ಸಿಸಿಟಿವಿಯ ಫೂಟೇಜ್ ಇದೆ ಈ ಪ್ರಕರಣದಲ್ಲಿ ತಳಮಟ್ಟದ ಅಧಿಕಾರಿಗಳು ಉಳಿಸುವ ನಿಟ್ಟಿನಲ್ಲಿ ಸುಳ್ಳು ನಾಟಕ ಮಾಡುತ್ತಿದ್ದಾರೆ .
ಈ ಪ್ರಕರಣದಲ್ಲಿ ಪೋಲಿಸರು ವೃತ್ತಿ ಧರ್ಮ ಮತ್ತು ಕರ್ತವ್ಯ ನಿಷ್ಠೆ ಮೆರೆಯಲಿ ಎಂದರು ನಮ್ಮ ಕಾರ್ಯಕರ್ತರ ಬಗ್ಗೆ ಕಪೋಕಲ್ಪಿತ ಯಾಕೆ ಸುದ್ದಿ ಮಾಡುತ್ತಿದ್ದಾರೆ ನಮ್ಮ ಕಾರ್ಯಕರ್ತರು ಪೆಟ್ಟು ತಿಂದಿದ್ದಾರೆ ವಿನಾ ಕಾನೂನು ಕೈಗೆತ್ತಿ ಕೊಂಡಿಲ್ಲ ಎಂದರು