ಚಾಮರಾಜನಗರ : ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ಉಪ ವಿಭಾಗದ, ಗೋಪಾಲಸ್ವಾಮಿ ಬೆಟ್ಟ ವಲಯದ ಗೋಪಾಲಪುರ ಗಸ್ತಿನ ಮಾದಪ್ಪನ ಕಡು ಅರಣ್ಯಪ್ರದೇಶದ ಬಳಿ ಅಂದಾಜು 30 ರಿಂದ 35 ವರ್ಷದ ಹೆಣ್ಣಾನೆಯ ಮೃತದೇಹ ಪತ್ತೆಯಾಗಿದೆ.
ಮೃತ ಹೆಣ್ಣಾನೆಯ ಹೊಟ್ಟೆಯ ಭಾಗದಲ್ಲಿ ಲೈಷ್ಮನೀಯ ಸೋಂಕು ತಗುಲಿದ್ದು, ನಾಲಿಗೆಯ ಭಾಗದಲ್ಲಿ ರಕ್ತಸ್ರಾವವಾಗಿದ್ದು, ಮೃತ ದೇಹದ ಕೆಲವು ಬಾಗಗಳು ಊತಗೊಂಡಿರುತ್ತದೆ. ಹೆಣ್ಣಾನೆಯ ಸಾವಿಗೆ ನಿಖರವಾದ ಕಾರಣ ತಿಳಿಯಲು ಅಂಗಾಂಗಳ ಮಾದರಿಯನ್ನು ಸಂಗ್ರಹಿಸಿ ವನ್ಯಪ್ರಾಣಿಗಳ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಸ್ಥಳಕ್ಕೆ ಗುಂಡ್ಲುಪೇಟೆ ಬಫರ್ ಜೋನ್ ಸಹಾಯಕ ಅರಣ್ಯಾಧಿಕಾರಿ ಪರಮೇಶ್, ಜಿ.ಎಸ್. ಬೆಟ್ಟ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್, ಇಲಾಖಾ ಪಶುವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಮತ್ತು ಆರ್. ರಘುರಾಮ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.