ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿಯಲ್ಲಿ ಗಣಿಗಾರಿಕೆ ಸ್ಥಳದಲ್ಲಿ ಗುಡ್ಡಕುಸಿದು ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ದಿನಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಅರೋಪಿ ಗಣಿ ಮಾಲೀಕ ಮಹೇಂದ್ರಪ್ಪ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹೇಂದ್ರಪ್ಪ ಮೂಲತಃ ಬೊಮ್ಮನಹಳ್ಳಿ ಗ್ರಾಮದವನಾಗಿದ್ದು ಕಳೆದ ಅನೇಕ ವರ್ಷಗಳಿಂದ ಗುಂಡ್ಲುಪೇಟೆ ಯಲ್ಲಿಯೇ ವಾಸವಾಗಿದ್ದ ಎನ್ನಲಾಗಿದ್ದು, ಕೇರಳ ಮೂಲದ ಹಕೀಂ ಎಂಬಾತನಿಗೆ ಗುತ್ತಿಗೆ ನೀಡಿದ್ದ ಆದರೆ ಅತಿ ಆಸೆಯಿಂದ ಹಕಿಂ ಮೇಲ್ಬಾಗದಿಂದ ಕೊರೆಯದೆ ಕೆಳಭಾಗವನ್ನು ಹೆಚ್ಚಾಗಿ ಕೊರೆದ ಪರಿಣಾಮ ಗುಡ್ಡ ಕುಸಿದಿರುವ ಅನುಮಾನ ವ್ಯಕ್ತವಾಗಿದೆ.
ಗುಡ್ಡ ಕುಸಿತ ಘಟನೆಯ ಪ್ರಮುಖ ಆರೋಪಿ ಮಹೇಂದ್ರಪ್ಪ ನನ್ನು ಗುರುವಾರ ರಾತ್ರಿ 9.30 ರ ಸಮಯದಲ್ಲಿ ಮೂಡ್ಲುಪುರ ಸೇತುವೆ ಬಳಿ ಬಂಧಿಸಲಾಗಿದ್ದು, ಎ2 ಆರೋಪಿ ಹಕೀಂ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.