ಚಾಮರಾಜನಗರ : ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ, ಗುಂಡ್ಲುಪೇಟೆ ಉಪ ವಿಭಾಗದ, ಓಂಕಾರ ವನ್ಯಜೀವಿ ವಲಯದ ಕುರುಬರಹುಂಡಿ ಶಾಖೆ-2, ಬರಗಿ ಗಸ್ತಿನ ಆರದೇವನಕಟ್ಟೆ ಅರಣ್ಯ ಪ್ರದೇಶದ ಬಳಿ ಹುಲಿಗಳ ಕಾದಾಟದಲ್ಲಿ ಗಂಡು ಹುಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಏಳು ವರ್ಷ ವಯಸ್ಸಿನ ಗಂಡು ಹುಲಿಯೊಂದು ಇನ್ನೊಂದು ಹುಲಿಯ ಜೊತೆ ಕಾದಾಟ ನಡೆಸಿ ಮೃತಪಟ್ಟಿರುವುದು ಸಿಬ್ಬಂದಿಗಳಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಹಾಗೂ ಅರಣ್ಯಾಧಿಕಾರಿ ಡಾ. ಪಿ.ರಮೇಶ್ಕುಮಾರ್, ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯಾಧಿಕಾರಿ ಕೆ. ಪರಮೇಶ್ ಇಲಾಖಾ ಪಶುವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ, ವನ್ಯಜೀವಿ ಪರಿಪಾಲಕ ಎಂ.ಕೆ. ನಂಜುಂಡೇರಾಜೇಅರಸ್, ಸರ್ಕಾರೇತರ ಪ್ರತಿನಿಧಿ ಆರ್. ರಘುರಾಮ್, ಬರಗಿ ಗ್ರಾಮ ಪಂಚಾಯ್ತಿ ಸದಸ್ಯ ಸೂರ್ಯಪ್ರಕಾಶರವರುಗಳ ಸಮಾಕ್ಷಮ ವೀಕ್ಷಿಸಿದ ಬಳಿಕ, ಇಲಾಖಾ ಪಶುವೈದ್ಯಾಧಿಕಾರಿಗಳಾದ ಡಾ.ವಾಸೀಂ ಮಿರ್ಜಾ ರವರಿಂದ ಮೃತ ಹುಲಿಯ ಮೃತ ದೇಹವನ್ನು ಮರಣೋತ್ತರ ಶವಪರೀಕ್ಷೆ ನಡೆಸಿ ಬಳಿಕ ಭಾರತೀಯ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯ ಪ್ರಕಾರ ಮೃತ ಹುಲಿಯ ದೇಹವನ್ನು ದಹಿಸಲಾಯಿತು.