ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಗುಂಡ್ಲುಪೇಟೆ ಮತ್ತು ಬೇಗೂರು ಉಪವಿಭಾಗದ ವತಿಯಿಂದ ಬೆಳಕು ಯೋಜನೆಗೆ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿ ಸರ್ಕಾರ ಕಡು ಬಡವರಿಗೆ ಇದುವರೆಗೂ ವಿದ್ಯುತ್ ಸಂಪರ್ಕ ಪಡೆಯದೆ ಇರುವುವವರನ್ನು ಗುರುತಿಸಿ ಈ ಯೋಜನೆಯನ್ನು ತಲುಪಿಸುತಿದ್ದು, ಇದಕ್ಕೆ ಫಲಾನುಭವಿಗಳು ಒಂದು ರೂ. ನೀಡುವಂತಿಲ್ಲ ಫಲಾನುಭವಿಯ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಬಲ್ಫ್ ಉರಿಯುವ ವರೆಗೂ ಸರ್ಕಾರವೇ ಭರಿಸಲಿದೆ.
ಇದು ಬಡವರ ಕಾರ್ಯಕ್ರಮ, ಶಕ್ತಿ ಇಲ್ಲದವರಿಗೆ, ಈಗಲೂ ಬೆಳಕಿಲ್ಲದ ಪರಿಸ್ಥಿತಿ ಇರುವವರನ್ನು ಗುರುತಿಸಿ ಅವರಿಗೆ ಸಂಪರ್ಕ ನಿಡುವುದು ಸರ್ಕಾರದ ಚಿಂತನೆ ಭಾಗ್ಯಜ್ಯೋತಿ, ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ, ಈಗ ಇಂಧನ ಸಚಿವರ ದೂರದೃಷ್ಟಿ ಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಿದೆ ಎಂದರು.
ಗ್ರಾ.ಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್, ಗ್ರಾ.ಪಂ ಅಧ್ಯಕ್ಷ ಬಿ,ಜಿ ಶಿವಕುಮಾರ್, ಇಇ ಪೂರ್ಣ ಚಂದ್ರ ತೇಜಸ್ವಿ, ಮಹದೇವಶೆಟ್ಟಿ,ಜಿ.ಸ್ವಾಮಿ, ಕೃಷ್ಣ, ರವಿ, ಸಿದ್ದಶೆಟ್ಟಿ, ಮಂಚಹಳ್ಳಿಬಾಬು, ಕೆ.ಆರ್.ಲೋಕೇಶ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಪ್ರಸಾದ್, ಎಇಇ ಕೆ.ಎಂ.ಸಿದ್ದ ಲಿಂಗಪ್ಪ, ಪಿಡಿಒ ಶಾಂತಮಲ್ಲಪ್ಪ,ಎಇಇ ರಾಮಚಂದ್ರರಾವ್ ಇದ್ದರು.