News Karnataka Kannada
Saturday, April 27 2024
ಚಾಮರಾಜನಗರ

ಆಲೂರಿನಲ್ಲಿ ಮಂಟೇಸ್ವಾಮಿ ಸರಳ ಉತ್ಸವ

Jatre
Photo Credit :

ಚಾಮರಾಜನಗರ: ಕೊರೊನಾ ಹಿನ್ನಲೆಯಲ್ಲಿ ತಾಲೂಕಿನ ಆಲೂರು ಗ್ರಾಮದಲ್ಲಿ ಶ್ರೀ ಮಂಟೇಲಿಂಗೇಶ್ವರ ಸ್ವಾಮಿಯ ಉತ್ಸವವು ಈ ಬಾರಿ ಸರಳವಾಗಿ ನಡೆಯಿತು.ಇದೇ ವೇಳೆ ನೀಲಗಾರರ ಭಕ್ತರಿಂದ ಮಂಟೇಸ್ವಾಮಿ ಕಂಡಾಯ ಮೆರವಣೆಗೆ ನಡೆಯಿತು.

ಗ್ರಾಮದ ಆರ್ಕೇಶ್ವರ ದೇವಾಲಯದಲ್ಲಿ ದೇವರ ಐದು ಕಂಡಾಯಗಳಿಗೆ ಪೂಜೆ ಸಲ್ಲಿಸಿ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಈ ವೇಳೆ ಭಕ್ತರು ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು. ಬಳಿಕ ಮೆರವಣಿಗೆ  ಬಸವ ಭವನಕ್ಕೆ ತಲುಪಿತು.

ಮೆರವಣಿಗೆ ತೆರಳಿದ ಸಂದರ್ಭದಲ್ಲಿ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಭಕ್ತಿಯಿಂದ ಪೂಜಾ ಕೈಂಕರ್ಯ ನೆರವೇರಿಸಿ, ಭಕ್ತರಿಗೆ ಪ್ರಸಾದ ವಿನೋಯೋಗ ಮಾಡಲಾಯಿತು.ಈ ಸಂದರ್ಭದಲ್ಲಿ ನೀಲಗಾರರು. ವೀರಶೈವ ಸಮಾಜದ ಮುಖಂಡರು ಗ್ರಾಮಸ್ಥರು ಹಾಜರಿದ್ದರು.

ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮುನ್ನ ಕಂಡಾಯ ಉತ್ಸವವು ಅದ್ಧೂರಿಯಾಗಿ ನಡೆಯುತ್ತಿತ್ತು. ಗ್ರಾಮದ ಜನರು ಮಾತ್ರವಲ್ಲದೆ ಸುತ್ತಮುತ್ತಲಿನ ಜನ ಸೇರುವುದರೊಂದಿಗೆ ವಿವಿಧ ಸೇವೆಗಳು ನಡೆಯುತ್ತಿದ್ದವು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಸರಳವಾಗಿ ನಡೆಸುತ್ತಾ ಬರಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು