ಚಾಮರಾಜನಗರ ; ಜಿಲ್ಲೆಯ ಯಳಂದೂರು ತಾಲೋಕಿನ ಗ್ರಾಮವೊಂದರಲ್ಲಿ ಅಂಗವಿಕಲ ಹಾಗೂ ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗು 2 ಲಕ್ಷ ರೂಪಾಯಿ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಇದೇ ತಾಲೋಕಿನ 26 ವರ್ಷದ ರವಿ ಅಲಿಯಾಸ್ ರವಿಕುಮಾರ್ ಎಂಬ ಯುವಕ ಶಿಕ್ಷೆಗೆ ಗುರಿಯಾದ ವ್ಯಕ್ತಿಯಾಗಿದ್ದಾನೆ. 2018ರ ಆಗಸ್ಟ್ 15 ರಂದು ಈ ಘಟನೆ ನಡೆದಿತ್ತು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಮೂರು ವರ್ಷಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಅಪರಾಧ ಸಾಭೀತಾದ ಹಿನ್ನಲೆಯಲ್ಲಿ ಯುವಕನಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಅಂಗವೈಕಲ್ಯ ಹಾಗೂ ಬುದ್ದಿಮಾಂದ್ಯೆಯಾದ ಒಂಭತ್ತು ವರ್ಷದ ಬಾಲಕಿ 2018ರ ಆಗಸ್ಟ್ 15 ರಂದು ಗ್ರಾಮದ ಶಾಲೆಯಲ್ಲಿ ಆಟವಾಡುತ್ತಿದ್ದಾಗ ಯುವಕ ರವಿ ಬಾಲಕಿ ಯನ್ನು ಪುಸಲಾಯಿಸಿ, ಆಕೆಯ ಬಾಯಿ ಮುಚ್ಚಿ ಮಹಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ಕೃತ್ಯ ಕಂಡ ಇತರ ಮಕ್ಕಳು ಬಾಲಕಿಯ ತಾತನಿಗೆ ವುಷಯ ತಿಳಿಸಿದರು. ತಕ್ಷಣ ಬಾಲಕಿಯ ತಾತ ಸ್ಥಳಕ್ಕೆ ಹೋದಾಗ ಬಾಲಕಿ ನಡೆದ ಘಟನೆ ವಿವರಿಸಿದ್ದಳು.
ಬಳಿಕ ಬಾಲಕಿಯ ತಾಯಿ ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಆರೋಪಿ ವಿರುದ್ದ ಐಪಿಸಿ ಸೆಕ್ಷನ್ 376(2) (ಎಲ್), 376 (ಎಬಿ) ಹಾಗೂ ಪೋಕ್ಸೊ ಕಾಯ್ದೆ 4(2) 5(ಜೆ) 1 ಹಾಗೂ 5 (ಕೆ) (ಎಂ) ಮತ್ತು 6ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ರವಿಯನ್ನು ಬಂಧಿಸಿದ್ದರು. ತನಿಖೆ ನಡೆಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.
ಅಪ್ರಾಪ್ತ ಬುದ್ದಿಮಾಂದ್ಯೆ ಮೇಲೆ ಅತ್ಯಾಚಾರ: ಯುವಕನಿಗೆ 20 ವರ್ಷ ಜೈಲು ಶಿಕ್ಷೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.