ನಂಜನಗೂಡು: ಕ್ಷೇತದಲ್ಲಿ ನಡೆದ ಬಿಜೆಪಿ ಪಕ್ಷದ ಬೂತ್ ವಿಜಯ ಸಂಕಲ್ಪ ಅಭಿಯಾನದಲ್ಲಿ ಶಾಸಕ ಬಿ ಹರ್ಷವರ್ಧನ್ ಕಾರ್ಯಕರ್ತರ ಜೊತೆ ಭಾಗವಹಿಸಿ ಕೇಂದ್ರ ಮತ್ತು ರಾಜ್ಯ ಸಕಾ೯ರದ ಸಾಧನೆಗಳನ್ನು ತಿಳಿಸುವ ಕರಪತ್ರ ಹಾಗೂ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಯ೯ಗಳ ಕರಪತ್ರವನ್ನು ಹಂಚುವುದರ ಜೊತೆಗೆ ಮನೆ ಮತ್ತು ವಾಹನಗಳಿಗೆ “ಬಿಜೆಪಿಯೇ ಭರವಸೆ” ಎಂಬ ಭಿತ್ತಿಪತ್ರ (ಸ್ಟಿಕ್ಕರ್) ಅಂಟಿಸಲಾಯಿತು.
ಇದೆ ಸಂದರ್ಭದಲ್ಲಿ ನಂಜನಗೂಡು ಬಿಜೆಪಿ ನಗರ ಮಂಡಲದ ಅಧ್ಯಕ್ಷರಾದ ಶ್ರೀನಿವಾಸ ರೆಡ್ಡಿ, ನಗರಸಭಾ ಅಧ್ಯಕ್ಷರಾದ ಮಹದೇವಸ್ವಾಮಿ, ಮಹದೇವಪ್ರಸಾದ್, ಶ್ರೀಕಂಠ, ಬಿಜೆಪಿ ನಗರ ಯುವಮೋಚಾ೯ ಅಧ್ಯಕ್ಷರಾದ ಮನೋಜ್, ಸಿದ್ಧರಾಜು ಮತ್ತಿತರ ಕಾಯ೯ಕತ೯ರು ಉಪಸ್ಥಿತರಿದ್ದರು.