ಮೈಸೂರು: ವೈಸಿಸಿ (ಯಂಗ್ ಕಮ್ಯೂನಿಕೆಟರ್ ಕ್ಲಬ್) ಹಾಗೂ ವಿ-ಲೀಡ್ ಆರ್ಗನೈಸೇಶನ್ ಅವರು ಶೇಷಾದ್ರಿಪುರಂ ಪದವಿ ಕಾಲೇಜಿನ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ತಿಳಿಸುವ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಮುಖ್ಯ ಭಾಷಣಕಾರರಾಗಿ ಡಾ.ಸೀತಾರಾಮ್ ಹಾಗೂ ರಮೇಶ್ ವೆಂಕಟನಮ್ ಅವರು ವಿದ್ಯಾರ್ಥಿಗಳಿಗೊಂದಿಗೆ ಇಂಟರಾಕ್ಷನ್ ನಡೆಸುವ ಮೂಲಕ ಒಂದು ಮತದ ಮೌಲ್ಯವೆಷ್ಟು, ಎಷ್ಟು ಮುಖ್ಯವಾಗುತ್ತದೆ. ಒಂದು ಮತದಿಂದ ಸರ್ಕಾರ ಕಟ್ಟಲುಬಹುದು, ಕೆಡವಲುಬಹುದು ಎಂಬುದನ್ನು ತಿಳಿಸಿಕೊಟ್ಟರು.
ಪ್ರತಿಯೊಬ್ಬರೂ ಮತದಾನ ಮಾಡುವುದು ಅವರ ಹಕ್ಕು. 2004ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎ.ಆರ್.ಕೃಷ್ಣಮೂರ್ತಿ ಅವರು ಸಂತೆಮರಹಳ್ಳಿಯಿಂದ ಸ್ಪರ್ಧಿಸುವಾಗ ಅವರ ವಿರುದ್ಧ ನಿಂತಿದ್ದ ಅಭ್ಯರ್ಥಿಯಿಂದ ಒಂದು ಮತದಿಂದ ಸೋಲನ್ನು ಅನುಭವಿಸುತ್ತಾರೆ. ಆ ಒಂದು ಮತ ಬೇರೆ ಯಾರದ್ದೂ ಅಲ್ಲ ಅವರ ಕಾರ್ ಡ್ರೈವರ್ನದ್ದು. ಡ್ರೈವರ್ ಬೆಳಗ್ಗೆಯಿಂದ ಸರ್ ಮತದಾನ ಮಾಡಲು ಹೋಗಬೇಕು ಎಂದು ಕೇಳಿದಾಗ ಮತದಾನ ಮಾಡುವೆಯಂತೆ ಬಿಡು ಎಂದು ಹೇಳಿದ್ದುರು.
ಆದರೆ ಕಾಲ ಮಿಂಚಿ ಹೋಗಿತ್ತು. ಡ್ರೈವರ್ ಗೆ ಮತದಾನ ಮಾಡಲು ಬಿಡದ ಕಾರಣದಿಂದಾಗಿ ಅವರು ಸೋಲನ್ನು ಎದುರಿಸಬೇಕಾಯಿತು. ಇದನ್ನು ಉದಾರಣೆಯಾಗಿ ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಒಂದು ಮತದ ಬೆಲೆ ಎಷ್ಟರಮಟ್ಟಿಗೆ ಎಂಬುದನ್ನು ತಿಳಿಸಿದರು.
ಪ್ರತಿಯೊಬ್ಬರೂ 18 ವರ್ಷ ತುಂಬಿದ ನಂತರ ಮತದಾರರ ಚೀಟಿ ಪಡೆದುಕೊಳ್ಳಬೇಕು ಮತ್ತು ತಪ್ಪದೇ ತಮ್ಮ ಕ್ಷೇತ್ರಕ್ಕೆ ಬರುವ ಪ್ರತಿಯೊಂದು ಚುನಾವಣೆಯಲ್ಲಿ ಕೂಡ ಮತದಾನ ಮಾಡಬೇಕು. ಸರ್ಕಾರವನ್ನು ತಪ್ಪು ಎಂದು ದೋಷಿಸುವುದು ಬಹಳ ಸುಲಭ ಆದರೆ ಆ ದೋಷದಲ್ಲಿ ನಮ್ಮ ಪಾಲು ಕೂಡ ಅಷ್ಟೇ ಇರುತ್ತದೆ. ನಾವು ಪ್ರಜಾಪ್ರಭುತ್ವದಲ್ಲಿ ಇರುವುದು, ನಮ್ಮ ನಾಯಕರನ್ನು ನಾವೇ ಆರಿಸಿಕೊಳ್ಳಲು ಅವಕಾಶ ಇರುವಾಗ ಅದನ್ನು ತಪ್ಪಿ ಹೋಗಲು ಬಿಡಬಾರದು ಎಂದು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಡಾ.ಎಂ.ಎಸ್ ಸಪ್ನಾ, ಶೇಷಾದ್ರಿಪುರಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಸೌಮ್ಯಾ ಇರಪ್ಪ ಮತ್ತಿತರರು ಉಪಸ್ಥಿತರಿದ್ದರು.