ಮೈಸೂರು: ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ಬರಡನಪುರ ಗ್ರಾಮದ ನಿವಾಸಿ ಮಹದೇವಸ್ವಾಮಿ, ಹುಣಸೂರು ತಾಲೂಕಿನ ಕರ್ಣಕುಪ್ಪೆ ಮೂಲದ ಅನಿತಾ, ಇವರ ಮಕ್ಕಳಾದ ಚಂದ್ರಕಲಾ ಮತ್ತು ಮಹಾಲಕ್ಷ್ಮಿ ಮೃತರು.
ಮೈಸೂರು ನಗರದ ಚಾಮುಂಡಿಪುರಂ 3ನೇ ಕ್ರಾಸ್ನಲ್ಲಿ ಬಾಡಿಗೆಗೆ ಪಡೆದುಕೊಂಡಿದ್ದ ಮನೆಯಲ್ಲಿ ನಾಲ್ವರೂ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾಲ್ವರೂ ಮೃತಪಟ್ಟು ಮೂರ್ನಾಲ್ಕು ದಿನಗಳಾಗಿದ್ದು, ಶವಗಳು ಕೊಳೆತು ನಾರುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ
ಜೀವನಕ್ಕೆ ಸಾಕಾಗುವಷ್ಟು ಆಸ್ತಿಪಾಸ್ತಿಯೂ ಇತ್ತು. ಆದ್ರೆ ಮಹದೇವಸ್ವಾಮಿ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದರು. ಕಾರಣವೇ ಇಲ್ಲದೆ ಲಕ್ಷ ಲಕ್ಷ ರೂಪಾಯಿ ಸಾಲದ ಹೊರೆಯನ್ನು ಮೈಮೇಲೆ ಏರಿಕೊಂಡಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತ ಕುಟುಂಬಸ್ಥರು ಅಂದಾಜಿಸುತ್ತಿದ್ದಾರೆ. ಆದರೂ ಈ ಸಾವಿನ ಸುತ್ತ ಅನುಮಾನ ಹುಟ್ಟಿಕೊಂಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.