ಮೈಸೂರು: ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡುತ್ತಿದ್ದ ಮೂವರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ರಾಜೀವ್ ನಗರ ನಿವಾಸಿ ಜಾವೇದ್ ಹಾಗೂ ಮಂಡಿ ಮೊಹಲ್ಲಾ ನಿವಾಸಿ ತೌಸಿಫ್ ಅವರು ಮಂಚೇಗೌಡನ ಕೊಪ್ಪಲು ನಿವಾಸಿ ಅಮ್ರಿನಾ ಸಭಾಳನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್ ಮೂಲಕ ಶ್ರೀಮಂತ ಹುಡುಗರನ್ನ ಬಲೆಗೆ ಬೀಳಿಸಿಕೊಂಡು ಹಣ ಒಡವೆ ಸುಲಿಗೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಉದಯಗಿರಿ ಪೊಲೀಸರು ಮೂವರನ್ನು ಬಂಧಿಸಿ, ಅವರಿಂದ 10 ಗ್ರಾಂ ಚಿನ್ನದ ಸರ, ಯಮಹಾ ಬೈಕ್ ಹಾಗೂ ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ.