News Karnataka Kannada
Sunday, April 28 2024
ಕರ್ನಾಟಕ

ಸಾಲಬಾಧೆಯಿಂದ ಇಬ್ಬರು ರೈತರು ಆತ್ಮಹತ್ಯೆ

Photo Credit :

ಸಾಲಬಾಧೆಯಿಂದ ಇಬ್ಬರು ರೈತರು ಆತ್ಮಹತ್ಯೆ

ಮದ್ದೂರು: ಸಾಲ ಬಾಧೆಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಶತಕ ದಾಟಿದ್ದು, ಮದ್ದೂರು ತಾಲೂಕಿನಲ್ಲಿ ಮತ್ತಿಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲೂಕಿನ ವಳೆಗೆರೆಹಳ್ಳಿ ಗ್ರಾಮದ ನಾಥಪ್ಪ ಉ. ಚಿಕ್ಕಮುತ್ತೇಗೌಡ (50) ಹಾಗೂ ಸಾದೊಳಲು ಗ್ರಾಮದ ಶಿವಲಿಂಗಯ್ಯ (55) ಆತ್ಮಹತ್ಯೆ ಮಾಡಿಕೊಂಡ ರೈತರು. ವಳಗೆರೆಹಳ್ಳಿ ಗ್ರಾಮದ ನಾಥಪ್ಪ ಅವರಿಗೆ 1.16 ಎಕರೆ ಜಮೀನಿದ್ದು, ರೇಷ್ಮೆ, ಭತ್ತ, ಕಬ್ಬು ಬೆಳೆಯಲು ಪಿಎಲ್ಡಿ ಬ್ಯಾಂಕ್ನಿಂದ 1.25 ಲಕ್ಷ ರೂ., ವಿಎಸ್ಎಸ್ಎನ್ಬಿ ಸೊಸೈಟಿಯಲ್ಲಿ ಬೆಳೆ ಸಾಲವಾಗಿ 25,000,  ಖಾಸಗಿಯಾಗಿ 6 ಲಕ್ಷ ರೂ. ಸಾಲ ಪಡೆದಿದ್ದರು.

ಸಾಲಗಾರರ ಒತ್ತಡ ಹೆಚ್ಚಾಗಿ ಮನನೊಂದು ಶನಿವಾರ ಬೆಳಗಿನ ಜಾವ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಪತ್ನಿ ಸರಸ್ವತಿ, ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳಿದ್ದಾಳೆ. ಸಾದೊಳಲು ಗ್ರಾಮದ ರೈತ ಶಿವಲಿಂಗಯ್ಯ ಅವರಿಗೆ 35 ಗುಂಟೆ ಜಮೀನಿದ್ದು, ಇದರಲ್ಲಿ ಕಬ್ಬು ಬೆಳೆ ಬೆಳೆದು, ಕಟಾವು ಮಾಡಿದ್ದರು. ಸಕಾಲಕ್ಕೆ ಕಾರ್ಖಾನೆಯು ಹಣ ನೀಡಿರಲಿಲ್ಲ ಎನ್ನಲಾಗಿದೆ.

ಮೃತ ಶಿವಲಿಂಗಯ್ಯ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮಗಳ ಮದುವೆಗಾಗಿ 4 ಲಕ್ಷ ರೂ. ಹಾಗೂ ಕೃಷಿಗಾಗಿ ಬ್ಯಾಂಕ್ ಸೇರಿದಂತೆ ಖಾಸಗಿಯಾಗಿ ಸಾಲ ಮಾಡಿದ್ದರು. ಸಾಲಗಾರರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಶನಿವಾರ ಬೆಳಗಿನ ಜಾವ ತನ್ನ ಜಮೀನಿನ ಬಳಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು