News Karnataka Kannada
Monday, April 29 2024
ಕರ್ನಾಟಕ

ವೀಕೆಂಡ್ ಕರ್ಫ್ಯೂಗೆ ಸೆಡ್ಡು ಹೊಡೆದ ಮೈಸೂರಿನ ವ್ಯಾಪಾರ ಸಂಘಟನೆಗಳು- ಅಂಗಡಿ ಮುಂಗಟ್ಟು ಮುಚ್ಚುವುದಿಲ್ಲವೆಂದು ಎಚ್ಚರಿಕೆ

Chamber Of Commerce
Photo Credit :

ಮೈಸೂರು ; ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿರುವ ಸರ್ಕಾರದ ವಿರುದ್ಧ ಹೋಟೆಲ್ ಮಾಲೀಕರ ಸಂಘ ಸೇರಿದಂತೆ ಮೈಸೂರಿನ ಹಲವು ವ್ಯಾಪಾರಸ್ಥ ಸಂಘಟನೆಗಳು ಸೆಡ್ಡು ಹೊಡೆದಿವೆ. ಸರ್ಕಾರ ವಿಧಿಸಿರುವ ವೀಕೆಂಡ್ ಕರ್ಫ್ಯೂ ಒಪ್ಪಿಕೊಳ್ಳುವುದಿಲ್ಲ. ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ವ್ಯಾಪರಸ್ಥ ಸಂಘಟನೆಗಳು ಈ ನಿರ್ಧಾರ ಮಾಡಿವೆ. ಮೈಸೂರು ಪ್ರವಾಸಿತಾಣಗಳ ಸ್ವರ್ಗ. ಪ್ರತಿದಿನ ಸಹಸ್ರಾರು ಜನರು ಮೈಸೂರಿಗೆ ಬರುತ್ತಾರೆ. ಮೈಸೂರಿಗೆ ಬರುವ ಪ್ರವಾಸಿಗರಿಗೆ ಇದರಿಂದ ತೊಂದರೆಯಾಗುತ್ತದೆ. ಈ ಹಿನ್ನೆಲೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ವೀಕೆಂಡ್ ಕರ್ಫ್ಯೂ ಮಾಡುತ್ತಿರುವುದು ಸರಿಯಲ್ಲ. ಈಗಾಗಲೇ ಕೊರೊನಾ ಆರ್ಭಟದ ವೇಳೆ ವಿಧಿಸಿದ್ದ ಲಾಕ್ ಡೌನ್ ನಿಂದ ಸಾವಿರಾರು ವ್ಯಾಪಾರಸ್ಥರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದಾರೆ. ಹೀಗಿರುವಾಗ ಮತ್ತೊಂದು ವೀಕೆಂಡ್ ಕರ್ಫ್ಯೂ ಮಾಡಿದ್ರೆ ಮತ್ತಷ್ಟು ಆರ್ಥಿಕ ಸಂಕಷ್ಟು ವ್ಯಾಪಾರಸ್ಥರು ಒಳಗಾಗುತ್ತಾರೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ವೀಕೆಂಡ್ ಲಾಕ್ ಡೌನ್ ಬದಲಿಗೆ ನೈಟ್ ಕರ್ಫ್ಯೂ ವಿಧಿಸಲು ನಮ್ಮ ಅಭ್ಯಂತರ ಎಂದು ಸಭೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಮೈಸೂರಿನಲ್ಲಿ 13 ಲಕ್ಷ ಮಂದಿ ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. 80 ಸಾವಿರ ಹೋಟೆಲ್ ಮಾಲೀಕರಿದ್ದಾರೆ. ಹೀಗೆ ವೀಕೆಂಡ್ ಲಾಕ್ ಡೌನ್ ವಿಧಿಸಿದ್ರೆ ಬಹಳ ಕಷ್ಟವಾಗುತ್ತದೆ. ಹೋಟೆಲ್ ಉದ್ಯಮದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೆಲಸ ಮಾಡುತ್ತಿರುವರನ್ನು ಸೇರಿಸಿ ಇಷ್ಟು ಕೆಲಸಗಾರರು ಇದ್ದಾರೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.
ಈ ಸಂಬಂಧ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಒಂದು ವೇಳೆ ಸರ್ಕಾರದಿಂದ ಯಾವುದೇ ಸಕರಾತ್ಮಕ ತೀರ್ಮಾನ ಬರದಿದ್ದರೆ ನಾವು ಸರ್ಕಾರದ ಆದೇಶಕ್ಕೆ ಕೇರ್ ಮಾಡದೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಸತ್ತೇವೆ ಎಂದು ನಾರಾಯಣ ಗೌಡ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು