ಮೈಸೂರು: 40 ವರ್ಷಗಳ ನಂತರ ಅಂಬಾವಿಲಾಸ್ ಅರಮನೆಯಲ್ಲಿ ನಡೆಯಲಿರುವ ಯಧುವೀರ್ ಮಹಾರಾಜ ಅವರ ಮದುವೆಯ ಹಿನ್ನಲ್ಲೆಯಲ್ಲಿ ಏಳು ದಿನಗಳ ಕಾಲ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿಗಳು ಖಚಿತ ಪಡಿಸಿವೆ.
40 ವರ್ಷಗಳ ನಂತರ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ನಡೆಯುತ್ತಿರುವ ರಾಜಮನೆತನದ ಮದುವೆಗೆ ಈಗಾಗಲೇ ಸಿದ್ದತೆಗಳು ಆರಂಭವಾಗಿದ್ದು, ಕಳೆದ ತಿಂಗಳು ಹಿರಿಯರ ಸಮ್ಮುಖದಲ್ಲಿ ಮಹಾರಾಜ ಯಧುವೀರ್ -ರಿಷಿಕಾ ಕುಮಾರಿ ಸಿಂಗ್ ಅವರ ಸಮ್ಮುಖದಲ್ಲಿ ಲಗ್ನ ಪತ್ರಿಕೆ ಶಾಸ್ತ್ರ ನಡೆದಿತ್ತು. ಈ ಲಗ್ನ ಪತ್ರಿಕೆ ಬರೆಸುವ ಶಾಸ್ತ್ರದಲ್ಲಿ ಯಧುವೀರ್ ಜನ್ಮ ನಕ್ಷತ್ರ ಹಾಗೂ ಪಟ್ಟಾಭಿಷೇಕ ನಡೆದ ದಿನ, ಗೋತ್ರ, ನಕ್ಷತ್ರದ ಅನುಗುಣವಾಗಿ ಜೂನ್ 27ರಂದು ಮದುವೆ ದಿನಾಂಕ ನಿಗದಿಪಡಿಸಲಾಗಿದೆ. ಅದರಂತೆ ಆರು ದಿನಗಳ ಕಾಲ ನಡೆಯುವ ಮದುವೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇದದ ಬಗ್ಗೆ ಮಹಾರಾಣಿ ಪ್ರಮೋದ ದೇವಿ ಒಡೆಯರ್ ಅರಮನೆ ಆಡಳಿತ ಮಂಡಳಿಗೆ ತಿಳಿಸಿದ್ದು ಯಾವ ಯಾವ ಸಮಯದಲ್ಲಿ ಸಾರ್ವಜನಿಕರಿಗೆ ನಿಷೇದ ಇರುವ ಬಗ್ಗೆ ಮುಂದಿನ ವಾರ ತಿಳಿಸುವುದಾಗಿ ಹೇಳಿದ್ದಾರೆ.
ಏಳು ದಿನ ಕಾಲ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧ:
ಜೂನ್ 22 ರಿಂದ ಅಂಬಾವಿಲಾಸ ಅರಮನೆಯ ಕಲ್ಯಾಣ ಮಂಟಪದಲ್ಲಿ ಯಧುವೀರ್ ಅವರ ಮದುವೆ ಶಾಸ್ತ್ರಗಳು ಆರಂಭವಾಗಲ್ಲಿದ್ದು 27ಕ್ಕೆ ಮದುವೆ ನಡೆಯಲ್ಲಿದ್ದು ಸುಮಾರು 25 ರಿಂದ 35 ಸಾವಿರ ಆಹ್ವಾನಿತ ಅತಿಥಿಗಳು ಮದುವೆಗೆ ಆಗಮಿಸಲ್ಲಿದ್ದು ಈ ಹಿನ್ನಲ್ಲೆ 22 ರಿಂದ 28ರವರೆಗೆ ಏಳು ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನಗಳು ನಡೆಯುವ ಸಮಯದಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನ ನಿರ್ಬಂಧಿಸಬೇಕೆಂದು ಮಹಾರಾಣಿ ಪ್ರಮೋದ ದೇವಿ ಅರಮನೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.