News Karnataka Kannada
Thursday, May 09 2024
ಮೈಸೂರು

ಫೇಸ್ ಬುಕ್ ನಲ್ಲಿ ಹಿಂದೂ ದೇವತೆಗಳ ಅವಹೇಳನ: ದೂರು

Photo Credit :

ಫೇಸ್ ಬುಕ್ ನಲ್ಲಿ ಹಿಂದೂ ದೇವತೆಗಳ ಅವಹೇಳನ: ದೂರು

ಮೈಸೂರು: ಕೇಂದ್ರ ಸಚಿವರ ವಿವಾದತ್ಮಾಕ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಫೇಸ್ ಬುಕ್ ನಲ್ಲಿ ಬರೆದಿದ್ದ ಹಾರೋಹಳ್ಳಿ ರವೀಂದ್ರ ವಿರುದ್ದ ಮೈಸೂರು ನಗರ ಡಿಸಿಪಿಗೆ ದೂರು ನೀಡಲಾಗಿದೆ.

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗೆಡೆ ವಿವಾದತ್ಮಾಕ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ಹಾರೋಹಳ್ಳಿ ರವೀಂದ್ರ ಎಂಬಾತ ಹಿಂದೂ ದೇವತೆಗಳ ಬಗ್ಗೆ ತನ್ನ ಫೇಸ್ ಬುಕ್ ಪೇಜ್ ನಲ್ಲಿ ನಾಲ್ಕು ಪುಟದಲ್ಲಿ ಶ್ರೀರಾಮ, ದಶರಥ, ಲಕ್ಷ್ಮಣ, ಸೀತೆ, ಲವ, ಕುಶ, ಕೃಷ್ಣ ಹೀಗೆ ಹಲವಾರು ಹಿಂದೂ ದೇವತೆಗಳು ಪುರಾತನ ಕಾಲದಲ್ಲಿ ಹೇಗೆ ಹುಟ್ಟಿದರು ಎಂಬ ಬಗ್ಗೆ ಆಧಾರವೇ ಇಲ್ಲ. ಇಂತಹ ವಿಚಾರವನ್ನು ತಿಳಿದಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗೆಡೆ ಅವರ ವಿವಾದತ್ಮಾಕ ಹೇಳಿಕೆ ಸರಿಯಲ್ಲ ಎಂದು ಹಿಂದೂ ದೇವತೆಗಳ ಮೂಲದ ಬಗ್ಗೆ ಫೇಸ್ ಬುಕ್ ನಲ್ಲಿ ಕೆಟ್ಟದಾಗಿ ಬರೆದಿದ್ದಾರೆ ಎಂದು ಕನ್ನಡ ಪರ ಸಂಘಟನೆಯವರು ಮೈಸೂರು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ವಿಷ್ಣುವರ್ಧನ ಬಳಿ ಹಾರೋಹಳ್ಳಿ ರವೀಂದ್ರ ವಿರುದ್ದ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರವೀಂದ್ರ ನಾನು ಹಿಂದೂ ದೇವತೆಗಳ ಬಗ್ಗೆ ಕೆಟ್ಟದಾಗಿ ಬರೆದಿಲ್ಲ. ಪುರಾತನ ಕಾಲದಲ್ಲಿ ದೇವತೆಗಳೇ ಪ್ರಾಣಿಗಳಿಂದ ಜನ್ಮ ತಾಳಿದ್ದಾರೆ ಎಂಬ ವಿಚಾರ ಇತಿಹಾಸದಲ್ಲಿ ದಾಖಲಾಗಿದೆ. ಇನ್ನೂ ಹೆಗೆಡೆ ಅವರಿಗೆ ಈ ವಿಚಾರ ತಿಳಿದಿಲ್ಲವೇ ಎಂಬ ವಿಚಾರವನ್ನು ಹೇಳಲು ಕೆಲವು ದೇವತೆಗಳನ್ನು ಉದಾಹರಣೆಯಾಗಿ ನೀಡಿದ್ದೇನೆ ಅಷ್ಟೇ ಎಂದು ಸ್ಪಷ್ಟೀಕರಣ ನೀಡಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
181

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು