ಮೈಸೂರು: ಫೇಸ್ಬುಕ್, ವಾಟ್ಸಾಪ್ ನಲ್ಲಿ ಸ್ನೇಹ ಬೆಳೆಸಿ ಮೈಸೂರಿನ ಚಾಮರಾಜುಪುರಂನ ಮಹಿಳೆಯೋರ್ವರು ಮೋಸ ಹೋದ ಘಟನೆ ನಡೆದಿದೆ.
ಮೈಸೂರಿನ ಚಾಮರಾಜುಪುರಂ ನಿವಾಸಿ ಲಂಗ್ಜಮ್ ರೆಬಿತ್ ರಾಣಿ ಕೆಲವು ವಾರಗಳ ಹಿಂದೆಯಷ್ಟೇ ಯುನೈಟೆಡ್ ಕಿಂಗ್ಡಮ್ ದೇಶದ ನಿವಾಸಿ ಅಲ್ಬರ್ಟ್ ಕೇನ್ ಎಂಬುವವರೊಟ್ಟಿಗೆ ಫೇಸ್ಬುಕ್ನಲ್ಲಿ ಪರಿಚಿತರಾಗಿ ಪ್ರೆಂಡ್ಸ್ ಆಗಿದ್ದಾರೆ. ಫೇಸ್ಬುಕ್ನಲ್ಲಿ ಪ್ರೇಂಡ್ಸ್ ಆದ ಇವರಿಬ್ಬರೂ ವಾಟ್ಸ್ಪ್ನಲ್ಲಿ ಚಾಟಿಂಗ್ ನಡೆಸುವಷ್ಟು ಹತ್ತಿರವಾಗಿದ್ದಾರೆ. ಹೀಗೆ ಸಾಮಾಜಿಕ ಜಾಲಾತಾಣದಲ್ಲೇ ಪರಿಚಿತರಾದ ಇಬ್ಬರಲ್ಲಿ ಒಂದು ದಿನ ಅಲ್ಬರ್ಟ್ ಕೇನ್ ಎಲೆಕ್ಟ್ರಾನಿಕ್ ವಸ್ತುಗಳಾದ ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ಮೈಸೂರಿನ ಲಂಗ್ಜಮ್ ರಾಣಿಗೆ ಪಾರ್ಸಲ್ ಕಳುಹಿಸುವುದಾಗಿ ತಿಳಿಸಿದ್ದಾರೆ. ಇದಾದ ಬಲಿಕ ಮಾರ್ಚ್ 21 ರಂದು ಮೀನಾಕ್ಷಿ ಎಂಬುವವರು ಕರೆ ಮಾಡಿ ತಾನೂ ನವದೆಹಲಿಯ ಕಸ್ಟಮ್ ಡಿಪಾರ್ಟ್ಮೆಂಟ್ ನಿಂದ ಲಂಗ್ಜಮ್ ಅವರಿಗೆ ಕರೆ ಮಾಡಿ ನಿಮಗೆ ಯುನೈಟೆಡ್ ಕಿಂಗ್ ಡಮ್ ನ ಆಲ್ಬರ್ಟ್ ಕೇನ್ ಎಂಬುವವರು ಒಂದು ಪಾರ್ಸಲ್ ಕಳುಹಿಸಿದ್ದು ಅದಕ್ಕೆ ಕಸ್ಟಮ್ ಟ್ಯಾಕ್ಸ್ 21,300 ರೂ ಪಾವತಿಸವಂತೆ ಒಂದು ಅಕೌಂಟ್ ನಂಬರ್ ನೀಡಿದ್ದಾರೆ.
ಮೀನಾಕ್ಷಿ ಹೆಸರಿನವರು ಹೇಳಿದ ಮಾತಿಗೆ ಮರುಳಾದ ಲಂಗ್ಜಮ್ ಮೀನಾಕ್ಷಿಯವರು ನೀಡಿದ ಅಕೌಂಟ್ ಗೆ ಹಣ ಸಂದಾಯ ಮಾಡಿದ್ದಾರೆ. ಮತ್ತೆ ಕರೆ ಮಾಡಿದ ಮೀನಾಕ್ಷಿ 69 ಸಾವಿರ ರೂ ಕಟ್ಟುವಂತೆ ತಿಳಿಸಿದ್ದು, ಅದಕ್ಕೂ ಒಪ್ಪಿದ ಲಂಗ್ಜಮ್ ಅಂದೆ ಹಣ ಹಾಕಿದ್ದಾರೆ. ಅದೇ ರೀತಿ ಮೂರನೇ ಬಾರಿಯೂ ಕರೆ ಮಾಡಿದ ಮೀನಾಕ್ಷಿ 1.61 ಲಕ್ಷ ಹಣ ಕಟ್ಟುವಂತೆ ಹೇಳಿ ಅಕೌಂಟ್ ಗೆ ಹಣ ಕಟ್ಟಿಸಿಕೊಂಡಿದ್ದಾರೆ. ಮಾ.28 ರಂದು ಅಂತಿಮ ಹಣ ಕಟ್ಟಿದ್ದು ಇದುವರೆವಿಗೂ ಯಾವುದೇ ಪಾರ್ಸಲ್ ಆಗಲಿ ಅಥವಾ ಪಾರ್ಸೆಲ್ ಕುರಿತು ದೂರವಾಣಿ ಕರೆಯಾಗಲಿ ಬಂದಿಲ್ಲದಿರುವುದರಿಂದ ಗಾಬರಿಗೊಂಡ ಲಂಗ್ಜಮ್ ಲಕ್ಷೀಪುರ ಪೊಲೀಸ್ ಠಾಣೆಗೆ ತೆರಳಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಲಕ್ಷ್ಮಿಪುರಂ ಠಾಣೆಯ ಪೊಲೀಸರು ಸೈಬರ್ ಕ್ರೈಂ ಪೊಲೀಸರ ಸಹಾಯದಿಂದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸಾಮಾಜಿಕ ಜಾಲಾತಾಣದ ಪರಿಚಿತರಾದ ವ್ಯಕ್ತಿಯ ಪ್ರೆಂಡ್ ಶಿಪ್ ಬೆಳೆಸಿ ಈ ರೀತಿ ಮೋಸ ಹೋಗುವುದಕ್ಕೂ ಮುನ್ನ ಕೊಂಚ ಎಚ್ಚರವಾಗಿರಬೇಕಿದೆ.