ಮೈಸೂರು: ಸಿಎಂ ಸ್ವಕ್ಷೇತ್ರ ವರುಣಾದ ಹಿಮ್ಮಾವು ಬಳಿ 821 ಎಕರೆ ಭೂಮಿಯನ್ನು ಸತ್ತವರ ಹೆಸರಿಗೆ ಖಾತೆ ಮಾಡಿಸಿ ಕೋಟ್ಯಂತರ ರೂಪಾಯಿ ಹಣವನ್ನು ರೈತರಿಗೆ ವಂಚಿಸಿದ್ದು, ಇದಕ್ಕೆ ಸಿಎಂ ಅವರ ಆರ್ಶೀವಾದವಿದೆ ಎಂದು ಮಾಜಿ ಸಂಸದ ಹೆಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದರು.
ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಸಂಸದ ಹೆಚ್.ವಿಶ್ವನಾಥ್, ಶಾಸಕ ಜಿ.ಟಿ ದೇವೇಗೌಡರ ವಿರುದ್ದದ ಹೆಚ್.ಬಿ ಭೂಗಹರಣವನ್ನು ಸಿಎಂ ಸಿದ್ದರಾಮಯ್ಯ ಎಸಿಬಿ ವರ್ಗಾವಣೆ ಮಾಡುವ ಮೂಲಕ ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾನೂನಿನ ಪ್ರಕಾರ ತನಿಖೆ ನಡೆಯಲಿ. ತನಿಖೆಗೆ ನಾವು ಎಲ್ಲಾ ರೀತಿಯ ಸಹಾಯ ನೀಡುತ್ತೇವೆ. ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಲಿ. ಆದರೆ ಸಿಎಂ ಸಿದ್ದರಾಮಯ್ಯ ಕೆ.ಹೆಚ್.ಬಿ ಭೂಗಹರಣದ ಕೇಸನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಿಮ್ಮ ತವರು ಮೈಸೂರು ಜಿಲ್ಲೆಯ ತ್ರಿಪುರ ಭೈರವಿ ಕೇಸ್ ಕಣ್ಣಿಗೆ ಕಾಣಿಸುತ್ತಿಲ್ಲವೇ? ವರುಣಾ ಕ್ಷೇತ್ರದ ವ್ಯಾಪ್ತಿಗೆ ಬರೋ ಹಿಮ್ಮಾವು ಬಳಿಯ 821 ಎಕರೆ ಭೂಮಿ ಕತೆ ಏನಾಯಿತು? 300 ರೈತರು ಇಲ್ಲಿ ವ್ಯವಸಾಯ ಮಾಡುತ್ತಿದ್ದರು. ಈ ಭೂಮಿಯನ್ನು ಒಂದೇ ದಿನ ಸತ್ತವರನ್ನು ಸೇರಿ ಖಾತೆ ಮಾಡಿಸಿದ್ದೀರಾ. ಒಂದೇ ದಿನದಲ್ಲಿ 10 ಜನರಿಗೆ 11 ಕೋಟಿ ಒಬ್ಬರ ಹೆಸರಿನಲ್ಲಿ ಸ್ಥಳೀಯ ಬ್ಯಾಂಕ್ ನಿಂದ ಡ್ರಾ ಆಗಿದೆ. ಇದರ ಬಗ್ಗೆ ತನಿಖೆಯಾಗಲಿ. ಈ ಸ್ಥಳೀಯ ಮಠದವರು ದೂರು ನೀಡಿದರೆ ಎಸಿಬಿ ಅದಕ್ಕೆ ಎನ್.ಸಿ.ಆರ್. ಕೊಟ್ಟಿದ್ದಾರೆ. ಈ ಪ್ರಕರಣ ಯಾಕೆ ಹಳ್ಳ ಹಿಡಿಯಿತು. ಎರಡು ರಾಷ್ಟೀಯ ಪಕ್ಷಗಳು ಜನವಿರೋಧಿ, ಹಾಗೂ ಜಾತ್ಯತೀತ ವಾದದ ವಿರೋಧಿಗಳಾಗಿದ್ದಾರೆ. ಕೆ ಹೆಚ್ ಬಿ ಪ್ರಕರಣ ಹಾಗೂ ಹಿಮ್ಮಾವು ಭೂ ಸ್ವಾಧಿನ ಪ್ರಕರಣ ಸಂಬಂಧ ಜೆ ಡಿ ಎಸ್ ನಿಂದ ಕಾನೂನು ಹೋರಾಟ ಮುಂದುವರೆಯುತ್ತದೆ ಎಂದರು.
ಮೈಸೂರಿನ ಮಠ ಒಂದಕ್ಕೆ ಸೇರಿದ ಜಾಗ ಕೂಡ ಬಿಟ್ಟಿಲ್ಲ, ನಿಮ್ಮ ಕ್ಷೇತ್ರದ ಮುನ್ನೂರು ರೈತರು ಇಂದಿಗೂ ಕೋರ್ಟ್ ಕಚೇರಿ ಅಲೆಯುತ್ತಿದ್ದಾರೆ. ಕೆ ಹೆಚ್ ಪಿ ಪ್ರಕರಣ ಪಾಪ ಜಿ ಟಿ ದೇವೇಡರ ಮಗನನ್ನು ಸೇರಿಸಿದ್ದಾರೆ. ಈ ಪ್ರಕರಣದಲ್ಲಿ ಅಧಿಕಾರಗಳನ್ನು ಅರೆಸ್ಟ್ ಮಾಡ್ತಿರಿ. ಆದ್ರೆ ಹಿಮ್ಮಾವು ಭೂಮಿ ಅಕ್ರಮದಲ್ಲಿ ಭಾಗಿಯಾಗಿದ್ದ ರಮೇಶ್ ಬಾಬು ಅನ್ನೊ ಮನುಷ್ಯನಿಗೆ ಪ್ರಮೋಷನ್ ಕೊಟ್ಟು ಮೈಸೂರು ತಹಶೀಲ್ದಾರ್ ಮಾಡಿದ್ದೀರಿ. ಭ್ರಷ್ಟ ಅಧಿಕಾರಿಗಳಿಗೆ ಸಿದ್ದರಾಮಯ್ಯ ಆಶ್ರಯ ಕೊಟ್ಟಿದ್ದಾರೆ. ನಿಮ್ಮ ಈ ನಡೆ ಜಿ ಟಿ ದೇವೇಗೌಡರಿಗೆ ಪ್ಲಸ್ ಆಗಲಿದೆ. ನಿಮಗೆ ಅದು ಮೈನಸ್ ಆಗಿದೆ. ಕ್ಷೇತ್ರದಲ್ಲಿ ಜೆಡಿಎಸ್ ಮತ್ತಷ್ಟು ಶಕ್ತಿ ಬಂದಿದೆ. ಕೆ.ಹೆಚ್.ಬಿ ಭೂ ಹಗರಣದಲ್ಲಿ ಜಿ.ಟಿ.ದೇವೇಗೌಡ ಹೆಸರು ನೇರವಾಗಿ ಕೇಳಿ ಬಂದಿಲ್ಲ ಎಂದು ಜಿ.ಟಿ ದೇವೇಗೌಡರ ಪರ ಬ್ಯಾಟಿಂಗ್ ಮಾಡಿದರು.
ರಾಹುಲ್ ಗಾಂಧಿ ಮೋಹನ್ ಭಾಗವತ್ ಕಾಲಿಗೆ ಬೀಳಲಿ
ಮುಂದಿನ ತಿಂಗಳಿನಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಚುನಾವಣೆ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಈ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಸಾಲು ಸಾಲು ದೇವಾಲಯಗಳಿಗೆ ರಾಹುಲ್ ಗಾಂಧಿಯನ್ನು ಕರೆದೊಯ್ಯಲು ಸಿದ್ದತೆ ಮಾಡಿದ್ದಾರೆ. ನಾನು ಹಿಂದು ಅಂತಾ ಹಿಂದು ದೇವಾಲಯಗಳಿಗೆ ಭೇಟಿ ಕೊಡ್ಸೋ ಬದಲು, ನಾಗ್ಪುರದ ಆರ್ ಎಸ್ ಎಸ್ ಕಚೇರಿಗೆ ಹೋಗಿ ಮೋಹನ್ ಭಾಗವತರ ಭೇಟಿ ಮಾಡಿ ಕಾಲಿಗೆ ಬೀಳಲಿ ಎಂದು ವ್ಯಂಗ್ಯವಾಡಿದರು.