ಮಳವಳ್ಳಿ: ತಾಲೂಕಿನ ದಾಸನದೊಡ್ಡಿ ಗ್ರಾಮದ ಅಂತರ್ಜಲ ಪೋಷಕ ಹಾಗೂ ಪರಿಸರವಾದಿ ಕುರಿಗಾಹಿ ಕಾಮೇಗೌಡರು ಪ್ರಸಕ್ತ ಸಾಲಿನ ರಮಾಗೋವಿಂದ ಪುರಸ್ಕಾರಕ್ಕೆ ಬಾಜನರಾಗಿದ್ದಾರೆ.
ದಾಸನದೊಡ್ಡಿ ಗ್ರಾಮದ ಕುಂದೂರು ಬೆಟ್ಟದ ತಪ್ಪಲಿನಲ್ಲಿ ಸುಮಾರು 10 ಕೆರೆಗಳನ್ನು ನಿರ್ಮಿಸಿರುವುದಲ್ಲದೆ, ಬೆಟ್ಟದ ತಪ್ಪಲಿನಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದು, ಅಂತರ್ಜಲ ವೃದ್ಧಿಗೆ ದಿಟ್ಟ ಹೆಜ್ಜೆಯಿಟ್ಟಿರುವ ಇವರ ಸೇವೆಯನ್ನು ಗುರುತಿಸಿರುವ ಮಂಗಳೂರು ಗಣೇಶ ಬೀಡಿ ಡಿ.ರಮಾಬಾಯಿ ಚಾರಿಟಬಲ್ ಫೌಂಡೇಶನ್ ಮತ್ತು ಎಂ.ಗೋಪಿನಾಥ ಶೆಣೈ ಚಾರಿಟಬಲ್ ಟ್ರಸ್ಟ್ ಇವರನ್ನು ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಜ.28ರಂದು ಸಂಜೆ 6 ಗಂಟಗೆ ಮೈಸೂರಿನ ಕಲಾಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ಪತ್ರ ಹಾಗೂ 3 ಲಕ್ಷ ನಗದು ನೀಡಿ ಗೌರವಿಸಲಾಗುವುದು ಎಂದು ಆಯ್ಕೆ ಸಮಿತಿ ತಿಳಿಸಿದೆ