ಮೈಸೂರು: ಸಿಎಂ ಜನತಾದರ್ಶನದಂದು ನ್ಯಾಯ ಕೇಳಲು ಬಂದ ದಲಿತ ಮಹಿಳೆಯ ಜತೆ ಒರಟಾಗಿ ವರ್ತಿಸಿದ ಈ ಸರ್ಕಾರ ಅನಾಗರಿಕ ಸರ್ಕಾರ ಎಂದು ಹೆಚ್ ಡಿ ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.
ಇಂದು ಮೈಸೂರಿನಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಟಿ ಶ್ರೀಕಂಠೇ ಗೌಡ ಅವರ ನಾಮಪತ್ರ ಸಲ್ಲಿಸಲು ಆಗಮಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾಧ್ಯಮದ ಜತೆ ಮಾತನಾಡಿ, ಮೇ 17 ರಂದು ಸಿಎಂ ಜನತಾ ದರ್ಶನಕ್ಕೆ ಮೈಸೂರಿಗೆ ಆಗಮಿಸಿದ ಸಂದರ್ಭ ನ್ಯಾಯ ಕೇಳಲು ದಲಿತ ಮಹಿಳೆಯೊಬ್ಬಳು ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ಸಿಎಂ ಅವರನ್ನು ಭೇಟಿ ಮಾಡಲು ಬಂದಾಗ ಪೊಲೀಸರು ಒರಟಾಗಿ ವರ್ತಿಸಿದ್ದು, ಮಹಿಳೆಯನ್ನು ಅಕ್ರಮವಾಗಿ ಕೂಡಿ ಹಾಕಿ ಆಕೆಯ ಮುಂದೆಯೇ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ. ಇದೊಂದು ಅನಾಗರಿಕ ಸರ್ಕಾರ ಇದರ ಬಗ್ಗೆ ಮಂಗಳವಾರ ವಿಧಾನಸೌಧದಲ್ಲಿ ಮಹಿಳೆಯಿಂದ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಬಣ್ಣ ಬಯಲು ಮಾಡುತ್ತೇನೆ ಎಂದರು.