ಮೈಸೂರು: ಡ್ರಗ್ಸ್ ಬಿಡುವಂತೆ ವೈದ್ಯರು ಸಲಹೆ ನೀಡಿದಕ್ಕೆ ಯುವಕನೋರ್ವ ಡ್ರಗ್ಸ್ ಬಿಡಲಾರದೇ ಪ್ರಾಣವನ್ನೇ ಬಿಟ್ಟಿರುವ ವಿಚಿತ್ರ ಘಟನೆ ನಗರದ ನಜರ್ ಬಾದ್ ನ ವೆಂಕಟಲಿಂಗಯ್ಯ ಬಡಾವಣೆಯಲ್ಲಿ ನಡೆದಿದೆ.
ಸುಮಂತ್(34) ಎಂಬಾತ ಯುವಕನೇ ಡ್ರಗ್ಸ್ ಮಾಫಿಯಾಕ್ಕೆ ಬಲಿಯಾಗಿರುವವನು. ಸುಮಂತ್ ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿ ಅನುತೀರ್ಣನಾಗಿದ್ದನು. ಸ್ನೇಹಿತರ ಸಹವಾಸದಿಂದ ಮೋಜು ಮಸ್ತಿಯ ಮಾಡಿಕೊಂಡಿದ್ದ ಸುಮಂತ್ ಮನೆಯಲ್ಲಿದ್ದ ಈತನಿಗೆ ಪೋಷಕರು ಹಣ ಕೊಟ್ಟು ರಿಯಲ್ ಎಸ್ಟೇಟ್ ಮಾಡಲು ಬೆಂಗಳೂರಿಗೆ ಕಳುಹಿಸಿದ್ದರು. ಅಲ್ಲಿಯೂ ಸಹ ಮಾದಕ ವ್ಯಸನಿಯಾಗಿ ಡ್ರಗ್ಸ್ ಸೇವನೆಗೆ ಒಳಗಾಗಿದ್ದನು.
ಪೋಷಕರು ಸುಮಂತ್ ಗೆ ಮದುವೆ ಮಾಡಲು ನಿಶ್ಚಯಿಸಿ ಮೈಸೂರಿಗೆ ಕರೆಸಿಕೊಂಡು ಮದುವೆ ತಯಾರಿ ನಡೆಸಿದ್ದರು. ಇದಕ್ಕೆಂದೆ ಮೇಲೆ ಬಾಡಿಗೆ ನೀಡಿದ್ದ ಮನೆಯನ್ನೇ ಬಿಡಿಸಿ ಸುಮಂತ್ ನನ್ನು ಅಲ್ಲಿ ಉಳಿದುಕೊಂಡಿದ್ದನು. ಈ ಮಧ್ಯೆ ಮನೆಯಲ್ಲಿ ಏಕಾಂಗಿಯಾಗಿ ಇರುತ್ತಿದ್ದ ಈತನ ಮೇಲೆ ಸಂಶಯಗೊಂಡ ಪೋಷಕರು ಆತನನ್ನು ವೈದ್ಯರ ಬಳಿಗೆ ಕರೆದೊಯ್ದುದಾಗ ಈತ ಡ್ರಗ್ಸ್ ಸೇವನಿಯಾಗಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನಲೆಯಲ್ಲಿ ವೈದ್ಯರು ನೀನು ಬದುಕ ಬೇಕಾದರೆ ಡ್ರಗ್ಸ್ ಸೇವನೆ ಬೀಡಬೇಕು ಹಾಗಿದ್ರೆ ಮಾತ್ರ ಈತನಿಗೆ ಮದುವೆ ಮಾಡಿ ಇಲ್ಲವಾದರೆ ಈತ ಹೆಚ್ಚು ದಿನಗಳ ಬದುಕುವುದಿಲ್ಲವೆಂದು ಹೇಳಿದ್ದಾರೆ. ಆದರೆ ಡ್ರಗ್ಸ್ ವ್ಯಸನಿಯಾಗಿದ್ದ ಈತ ಡ್ರಗ್ಸ್ ಬಿಡಲಾಗದೆ ಅನ್ಯದಾರಿಯೂ ಕಾಣಲಾಗದೇ ರಾತ್ರಿ ವೇಳೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ಸ್ಥಳಕ್ಕೆ ಧಾವಿಸಿರುವ ನಜರ್ ಬಾದ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.