News Karnataka Kannada
Sunday, May 19 2024
ಮೈಸೂರು

ಜೂ. 27ರಂದು ಕರ್ಕಾಟಕ ಲಗ್ನ, ಸಾವಿತ್ರ ಮುಹೂರ್ತದಲ್ಲಿ ಯದುವೀರ್ ವಿವಾಹ

Photo Credit :

ಜೂ. 27ರಂದು ಕರ್ಕಾಟಕ ಲಗ್ನ, ಸಾವಿತ್ರ ಮುಹೂರ್ತದಲ್ಲಿ ಯದುವೀರ್ ವಿವಾಹ

ಮೈಸೂರು: ವಿಶ್ವ ಪ್ರಸಿದ್ಧ ಮೈಸೂರು ಅರಮನೆಯಲ್ಲಿ 40 ವರ್ಷಗಳ ನಂತರ ಮತ್ತೊಂದು ಮದುವೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದ್ದು, ಮದುವೆಯ ಮುಹೂರ್ತದ ಸಮಯ ಹತ್ತಿರ ಸಮೀಪಿಸುತ್ತಿದೆ. ಜೂನ್. 27ರಂದು ವಿವಾಹ ಮುಹೂರ್ತ ಗೊತ್ತುಪಡಿಸಿದ್ದು, ಅಂದು ಬೆಳಿಗ್ಗೆ 9-05 ರಿಂದ 9-35ರ ಒಳಗೆ ಸಲ್ಲುವ ಕರ್ಕಾಟಕ ಶುಭಲಗ್ನ ಸಾವಿತ್ರ ಮುಹೂರ್ತದಲ್ಲಿ, ಗುರುಹಿರಿಯರ ಸಮ್ಮುಖದಲ್ಲಿ  ಯದುವೀರ್ ವಿವಾಹ ನಡೆಯಲಿದ ಎಂದು  ರಾಜಮಾತೆ ಅರಮನೆಯ ಒಡತಿ ಮಹಾರಾಣಿ ಪ್ರಮೋದಾದೇವಿ ತಿಳಿಸಿದರು.

ಇಂದು ಅರಮನೆಯ ವಿಶಾಲವಾದ ಕೊಠಡಿಯೊಂದರಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ವಿಷಯ ಪ್ರಸ್ಥಾಪಿಸಿದರು. ಸಾಂಕೇತಿಕವಾಗಿ ಜೂ. 22 ರಿಂದ ಮದುವೆ ಸಂಭ್ರಮದ ಕಾರ್ಯಗಳು ಆರಂಭವಾಗುತ್ತವೆ, ಮೊದಲ ದಿನ ಅರಮನೆ ಸುತ್ತಲೂ ಇರುವ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ, 23, 24ರಂದು ಕುಲದೇವತೆ ಚಾಮುಂಡೇಶ್ವರಿ ಸೇರಿದಂತೆ ಇನ್ನಿತರೆ ದೇವತೆಗಳ, ಹಾಗೂ ಗುರುಹಿರಿಯರ ರಾಜ ವಂಶಸ್ಥರ ಪೂಜೆಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯಲಿವೆ, 25 ರಿಂದ ಅಧಿಕೃತವಾಗಿ ಬೆಳಿಗ್ಗೆ ವರನಿಗೆ ಎಣ್ಣೆ ಸ್ನಾನ, ರಾಜಗುರುಗಳಾದ ಪರಕಾಲ ಮಠಾಧೀಶರ  ಪಾದಪೂಜೆ, ಗುರುಹಿರಿಯರ, ಬಂಧು ಬಳಗದವರ  ಆಶೀರ್ವಾದ ಹಾಗೂ ಮದುವೆಗೆ ಸಂಬಂಧಿಸಿದ ಕಾರ್ಯಗಳು ನಡೆಯಲಿವೆ. 26 ರಂದು ಸ್ಥಂಭ ಮಹೂರ್ತ, ಕಂಕಣ ಕಟ್ಟುವುದು, ದೇವತಾ ಕಾರ್ಯಗಳು ಎಲ್ಲವೂ ಅರಮನೆಯ ಅಂಬಾವಿಲಾಸ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ,  27 ರಂದು ಕರ್ಕಾಟಕ ಶುಭ ಲಗ್ನದಲ್ಲಿ ರಾಜಸ್ಥಾನ ಮೂಲದ ರಾಜ ಕುಟುಂಬಕ್ಕೆ ಸೇರಿದ ತ್ರಿಶಿಕಾ ಕುಮಾರಿ ಸಿಂಗ್ ಎಂಬ ವಧುವನ್ನು ಅವರನ್ನು ಯಧುವೀರ್ ವರಿಸಲಿದ್ದಾರೆ ಎಂದು ಹೇಳಿದರು.

28 ರಂದು ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ, 500ಕ್ಕೂ ಹೆಚ್ಚು ವಿಐಪಿಗಳು, 2000ಕ್ಕೂ ಹೆಚ್ಚೂ ಬಂಧು ಬಳಗದವರಿಗೆ ಅವಕಾಶ ಮಾಡಿಕೊಡಲಾಗಿದೆ, ಆರು ದಿನಗಳು ಒಂದೊಂದು ರೀತಿಯ  ವಿಶೇಷ ಬೋಜನ, ಸಿಹಿ ತಿನಿಸುಗಳು, ಪಾಯಸ ಮುಂತಾದವುಗಳ ವ್ಯವಸ್ಥೆ ಮಾಡಲಾಗುವುದು, ಸಾರ್ವಜನಿಕರು ಮದುವೆ ವೀಕ್ಷಣೆಗಾಗಿ,ಅವರ ಅನುಕೂಲಕ್ಕಾಗಿ ಅರಮನೆಯ ಆವರಣದಲ್ಲಿ ದೊಡ್ಡ ದೊಡ್ಡ ಪರದೆಗಳನ್ನು ಅಳವಡಿಸಲಾಗುತ್ತದೆ, ಇದಕ್ಕಾಗಿ ಪೊಲಿಸರ ಸಲಹೆ ಪಡೆಯಲಾಗಿದ್ದು, ಅವರ ಸಲಹೆಗಾಗಿ ಕಾಯುತ್ತಿರುವುದಾಗಿಯೂ,  ಇದಕ್ಕಾಗಿ ಪೊಲಿಸರ ಸಲಹೆ ಪಡೆಯಲಾಗಿದ್ದು, ಅವರ ಸಲಹೆಗಾಗಿ ಕಾಯುತ್ತಿರುವುದಾಗಿ ರಾಣಿ ಪ್ರಮೋದಾದೇವಿ ತಿಳಿಸಿದರು.

28 ರಂದು ಆರತಕ್ಷತೆ ಸಮಯದಲ್ಲಿ ಸಂಗೀತ ಕಚೇರಿಯನ್ನು ಏರ್ಪಡಿಸಲಾಗಿದೆ, ಈ ಮದುವೆ ಕಾರ್ಯಗಳು  ಈ ಹಿಂದೆ ರಾಜ ಮನೆತನದಲ್ಲಿ ಯಾವರೀತಿ ನಡೆದಿತ್ತೋ ಅದೇರೀತಿಯಲ್ಲಿ ಚಾಚೂತಪ್ಪದೇ ಎಲ್ಲವನ್ನೂ ನಡೆಸಲಾಗುತ್ತದೆ ಮದುವೆಯ ಸಂದರ್ಭದಲ್ಲಿ ಪೊಲಿಸರ ಸಹಾಯ ಕೇಳಲಾಗಿದೆ, ಜಾಗದ ಅಭಾವದ ಕಾರಣ ಅವರ ಸಲಹೆ ಸೂಚನೆಗಳಂತೆ ಸಾರ್ವಜನಿಕರ ನಿಯಂತ್ರಣ ನಡೆಯಲಿದೆ ಎಂದರು.

ಈ ಮದುವೆಗಾಗಿ ರಾಷ್ಟ್ರದ ಪ್ರಧಾನಿ, ಸೋನೀಯಾಗಾಂದಿ, ಮುಖ್ಯ ಮಂತ್ರಿಗಳು, ಸಚಿವರುಗಳು, ಸೇರಿದಂತೆ ಎಲ್ಲಾ ಪಕ್ಷದ  ಮುಖಂಡರುಗಳು ಮಂತ್ರಿಗಳನ್ನು ಆಹ್ವಾನಿಸಲಾಗಿದೆ.  ಎಲ್ಲರಿಗೂ  ಮೈಸೂರಿನ ಸಾಂಸ್ಕೃತಿಕ ಪದ್ಧತಿಯಂತೆ  ಸೌತ್ ಇಂಡಿಯನ್ ಊಟ ಉಪಚಾರ ವ್ಯವಸ್ಥೆ ಮಾಡಲಾಗುವುದು, ಬೆಂಗಳೂರಿನಲ್ಲಿರುವ ಗಣ್ಯರಿಗಾಗಿ ಬೆಂಗಳೂರಿನ ಅರಮನೆಯಲ್ಲಿ ಜುಲೈ 2 ರಂದು ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಯಧುವೀರ್ ನನ್ನು ದತ್ತು ತೆಗೆದುಕೊಳ್ಳುವ ಮುನ್ನವೇ ಈ ಜೋಡಿಗೆ 2013ರಲ್ಲೇ ಮದುವೆ ನಿಶ್ಚಯವಾಗಿತ್ತು.  ಮದುವೆ  ನಂತರ ಅಮೇರಿಕಾದಲ್ಲಿ ಎಂಬಿಎ ವ್ಯಾಸಂಗ ಮಾಡಲಿದ್ದರೆ. ನನಗೆ ರಾಜಕೀಯ ಇಷ್ಟ ಇಲ್ಲಾ, ಅದರ ಬಗ್ಗೆ ಆಸಕ್ತಿಯೂ ಇಲ್ಲಾ, ರಾಜಕೀಯಕ್ಕೆ ಬರಲ್ಲಾ ಎಂದು ಮತ್ತೊಂದು ಪ್ರಶ್ನೆಗೆ ಮಹಾರಾಣಿ ಉತ್ತರಿಸಿದರು. ಮದುವೆ ಕಾರ್ಯ ಮುಗಿದ ಮೇಲೆ  ಅರಮನೆಯಲ್ಲಿ ನಡೆದ ಫೋಟೊ ಶೂಟ್ ಬಗ್ಗೆ ವಿಚಾರಣೆ ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ  ಪತ್ರ ಬರೆಯುವುದಾಗಿ ಪ್ರಶ್ನೆಗೆ ಉತ್ತರಿಸಿದರು.
 
 
 
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು